ಕ್ಯಾತಮಾರನಹಳ್ಳಿಯ ಗಲಭೆಯನ್ನು ಪ್ರಭಟಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯು ಜೈಲ್ಭರೋ ಚಳುವಳಿ ನಡೆಸುತ್ತಿದ್ದ ವೇಳೆ ಗಲಭೆ ಉಂಟಾಗಿದ್ದು, ಗಲಭೆ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿ, ಗಾಳಿಯಲ್ಲಿ ಗುಂಡುಹಾರಿಸಿದ ಘಟನೆ ಸಂಭವಿಸಿದೆ.
ಮಿಲಾದ್ಬಾಗ್ ಪಾರ್ಕಿನಲ್ಲಿ ಸಂಘಟನೆಯು ಜೈಲುಭರೋ ಚಳುವಳಿ ಹಮ್ಮಿಕೊಂಡಿತ್ತು. ನಿಷೇಧಾಜ್ಞೆ ಇರುವ ಕಾರಣ ಚಳುವಳಿ ನಡೆಸದಂತೆ ಪೊಲೀಸರು ಮನವಿ ಮಾಡಿದರೂ ಪೈಲಟ್ ವೃತ್ತದಲ್ಲಿ ಸೇರಿದ್ದ ಸಾವಿರಾರು ಮಂದಿ ಪೊಲೀಸರ ಮೇಲೆ ಕಲ್ಲು ಹಾಗೂ ಚಪ್ಪಲಿಗಳನ್ನು ತೂರಿದರು.
ಈ ವೇಳೆ ಗಲಭೆ ನಿಯಂತ್ರಿಸಲು ಪೊಲೀಸರು ಲಾಠಿಪ್ರಹಾರ ಹಾಗೂ ಅಶ್ರುವಾಯು ಸಿಡಿಸಿದರು. ಪರಿಸ್ಥಿತಿ ನಿಯಂತ್ರಣಕ್ಕೆ ಬಾರದಿದ್ದಾಗ ಗಾಳಿಯಲ್ಲಿ ಗುಂಡು ಹಾರಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಅರಮನೆ ನಗರಿ ಮತ್ತೆ ಉದ್ವಿಗ್ನಗೊಂಡಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಕಳೆದ ವಾರವಷ್ಟೆ ಕೋಮುಗಲಭೆಗೆ ತುತ್ತಾದ ಮೈಸೂರು ನಲುಗಿ ಹೋಗಿದ್ದು, ಮೂವರು ಸಾವನ್ನಪ್ಪಿದ್ದರೆ ಹಲವಾರು ಮಂದಿ ಗಾಯಗೊಂಡಿದ್ದರು.
|