ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಿಜೆಪಿಗೆ ಜನರೇ ಪಾಠ ಕಲಿಸುತ್ತಾರೆ: ಸಿಂಧ್ಯಾ (BJP | JDS | Congress | Deve gowda | Kumaraswamy)
 
ರಾಜ್ಯದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಸರ್ಕಾರ ಪಕ್ಷದ ಮುಖವಾಣಿಯಂತೆ ಏಕಪಕ್ಷೀಯವಾಗಿ ಕಾರ್ಯನಿರ್ವಹಿಸುತ್ತಿದೆ. ಜನರ ಕಷ್ಟಗಳಿಗೆ, ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಇಂತಹ ಹೊಣೆಗೇಡಿ, ಪಕ್ಷಪಾತ ಧೋರಣೆಯ ಸರ್ಕಾರವನ್ನೇ ಇದುವರೆಗೆ ಕಂಡಿಲ್ಲ. ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿರುವ ಬಿಜೆಪಿ ಸರ್ಕಾರಕ್ಕೆ ಜನರೇ ಬುದ್ಧಿ ಕಲಿಸುತ್ತಾರೆ ಎಂದು ಮಾಜಿ ಸಚಿವ, ಜೆಡಿಎಸ್ ಮುಖಂಡ ಪಿ.ಜಿ.ಆರ್.ಸಿಂಧ್ಯಾ ಹೇಳಿದ್ದಾರೆ.

ಅವರು ಕನಕಪುರ ತಾ.ಮರಳವಾಡಿ ಸಮೀಪದ ಶ್ರೀಅನ್ನಪೂರ್ಣೆಶ್ವರಿ ತಪೋಕ್ಷೇತ್ರದಲ್ಲಿ ವಿಜಯೋತ್ಸವದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಜೆಡಿಎಸ್ ಶಾಸಕ ಕೆ.ರಾಜು ತಮ್ಮ ಗೆಲುವಿಗೆ ಶ್ರಮಿಸಿದ ಮುಖಂಡರಾದ ಪಿ.ಜಿ.ಆರ್.ಸಿಂಧ್ಯಾ ಹಾಗೂ ಕಾರ್ಯಕರ್ತರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತಾ ತಾಲೂಕಿಗೆ ಹೊಸಬನಾದರೂ ಜನರು ಬಹುಮತ ನೀಡಿ ಆರಿಸಿರುವುದಕ್ಕೆ ಸಿಂಧ್ಯಾ ಅವರ ಆಶೀರ್ವಾದವೇ ಕಾರಣ ಎಂದರು.

ಪ್ರತಿ 15ದಿನಗಳಿಗೊಮ್ಮೆ ಹಾರೋಹಳ್ಳಿ, ಮರಳವಾಡಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ನೀಗಿಸುವುದರೊಂದಿಗೆ ಕಾರ್ಯಕರ್ತರಿಗೆ ರಕ್ಷಣೆ ನೀಡಲೂ ಸಿದ್ದವಿರುವುದಾಗಿ ತಿಳಿಸಿದರು.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ