ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟಕ್ಕೆ ಇಬ್ಬರು ಬಲಿ (Bangalore | Blast | Police | Soap Factory)
 
ಸಾಬೂನು ತಯಾರಿಕೆಯ ರಾಸಾಯನಿಕ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟಗೊಂಡು ಇಬ್ಬರು ಮೃತಪಟ್ಟು, ಐವರು ಗಾಯಗೊಂಡಿರುವ ಘಟನೆ ನಗರದ ಹೊರವಲಯದ ಹೆಬ್ಬಗೋಡಿ ಬಳಿಯ ತಿರುಪಳ್ಳಿಯಲ್ಲಿ ಶುಕ್ರವಾರ ಸಂಭವಿಸಿದೆ.

ತಿರುಪಳ್ಳಿಯ ಹುಲಿಮಂಗಲ ರಸ್ತೆಯಲ್ಲಿರುವ ಕಿರಣ್ ಗ್ಲೋಬಲ್ ಕೆಮಿಕಲ್ಸ್ ಕಾರ್ಖಾನೆಯಲ್ಲಿ ಸಾಬೂನು ತಯಾರಿಸಲು ಸಿದ್ಧಪಡಿಸಿದ್ದ ರಾಸಾಯನಿಕ ತುಂಬಿದ್ದ ಬಾಯ್ಲರ್ ಬೆಳಿಗ್ಗೆ ದಿಢೀರ್ ಸ್ಫೋಟಗೊಂಡಿತ್ತು.

ಸ್ಫೋಟದಲ್ಲಿ ಸಿಕ್ಕ ಕಾರ್ಖಾನೆಯ ಸೆಕ್ಯೂರಿಟಿ ನೇಪಾಳ ಮೂಲದ ಪ್ರೇಮ್ ಬಹದ್ದೂರ್(35) ಹಾಗೂ ಹೆಲ್ಪರ್ ಕನಕಪುರದ ಮರಳವಾಡಿ ಬೈರಪ್ಪ ಅಲಿಯಾಸ್ ಬೈರೇಗೌಡ(40) ಸ್ಥಳದಲ್ಲೇ ಸಾವನ್ನಪ್ಪಿದ್ದರು.

ಘಟನೆಯಲ್ಲಿ ಐವರು ಗಾಯಗೊಂಡಿದ್ದು ಅವರೆಲ್ಲರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದೆ. ಸ್ಫೋಟದ ಶಬ್ದ ಎರಡು ಕಿ.ಮೀ.ವರೆಗೆ ಕೇಳಿಸಿದ್ದು, ಹತ್ತಿರದ ತಿರುಪಳ್ಳಿಯ 30ಕ್ಕೂ ಹೆಚ್ಚು ಮನೆಗಳು ಜಖಂಗೊಂಡಿದ್ದು, 15ಕ್ಕೂ ಹೆಚ್ಚು ಟಿವಿಗಳು. ಎಲೆಕ್ಟ್ರಾನಿಕ್ ವಸ್ತುಗಳು ಹಾನಿಗೀಡಾಗಿವೆ. ಸ್ಫೋಟದ ಶಬ್ದಕ್ಕೆ ತಿರುಪಳ್ಳಿ ಸೇರಿ ಸುತ್ತಮುತ್ತಲ ಗ್ರಾಮಸ್ಥರು ಕೆಲಕಾಲ ಆತಂಕಗೊಂಡಿದ್ದರು.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ