ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬೆಂಗಳೂರು: ಒಂಟಿ ಮನೆಯಲ್ಲಿ ಬರ್ಬರ ತ್ರಿವಳಿ ಕೊಲೆ (Bangalore | Murder | crime beat | Ramamurthy nagar | Assam)
Feedback Print Bookmark and Share
 
ಆರ್‌ಟಿ ನಗರದಲ್ಲಿ ನಡೆದ ತ್ರಿವಳಿ ಕೊಲೆ ಪ್ರಕರಣವನ್ನು ಭೇದಿಸಲು ಪೊಲೀಸರು ಇನ್ನೂ ಹೆಣಗಾಡುತ್ತಿರುವಾಗಲೇ ರಾಮಮೂರ್ತಿ ನಗರದಲ್ಲಿ ಮತ್ತೊಂದು ತ್ರಿವಳಿ ಕೊಲೆ ನಡೆದಿದ್ದು ನಿರಂತರ ಕೊಲೆಗಳಿಂದಾಗಿ ನಗರದ ಜನತೆ ಬೆಚ್ಚಿ ಬಿದ್ದಿದ್ದಾರೆ.

ಆರ್‌ಟಿ ನಗರದಂತೆ ರಾಮಮೂರ್ತಿ ನಗರದ ಜಯಂತಿನಗರದಲ್ಲಿ ತಂದೆ, ತಾಯಿ ಹಾಗೂ ಮಗ ಕೊಲೆಯಾಗಿದ್ದು, ಎರಡು ದಿನಗಳ ನಂತರ ಪ್ರಕರಣ ಬಯಲಾಗಿದೆ.

ಜಯಂತಿ ನಗರದ ಒಂಟಿ ಮನೆಯಲ್ಲಿ ವಾಸಿಸುತ್ತಿದ್ದ ಪ್ರಸಿದ್ಧ ಒಳಾಂಗಣ ವಿನ್ಯಾಸಗಾರ ರಾಹುಲ್ ದಾಸ್(45), ಪತ್ನಿ ಪುಷ್ಪಲತಾ ದಾಸ್(40) ಹಾಗೂ ಮಗ ಅಗ್ನೀಶ್(8) ಕೊಲೆಯಾಗಿದ್ದಾರೆ.

ಅಸ್ಸಾಂ ಮೂಲದ ರಾಹುಲ್ ದಾಸ್ ಅವರನ್ನು ನೀರಿನ ಡ್ರಮ್‌ನಲ್ಲಿ ಮುಳುಗಿಸಿ, ಪುಷ್ಪಲತಾ ಮತ್ತು ಅಗ್ನೀಶ್‌ನನ್ನು ಬಾತ್‌ಟಬ್‌ನಲ್ಲಿ ಮುಳುಗಿಸಿರುವ ದುಷ್ಕರ್ಮಿಗಳು ಅಮಾನುಷವಾಗಿ ಕೊಲೆ ಮಾಡಿ ಮನೆ ಬಾಗಿಲಿಗೆ ಹಾಗೂ ಗೇಟ್‌ಗೆ ಬೀಗ ಹಾಕಿ ಪರಾರಿಯಾಗಿದ್ದರು.

ದಾಸ್ ಅವರ ಸಹೋದರ ಪ್ರೊ.ದಾಸ್ ಅವರು ಬಿಜಾಪುರದಲ್ಲಿ ಕಳೆದೆರಡು ದಿನಗಳಿಂದ ರಾಹುಲ್ ದಾಸ್‌ಗೆ ಫೋನ್ ಮಾಡಿದ್ದು ಯಾರೂ ತೆಗೆಯದ ಕಾರಣ ಆತಂಕಗೊಂಡು ಶುಕ್ರವಾರ ಬೆಂಗಳೂರಿಗೆ ದೌಡಾಯಿಸಿ ಮನೆ ಬಳಿ ಬಂದಿದ್ದರು. ಎರಡು ದಿನಗಳ ಹಿಂದೆ ಕೊಲೆ ನಡೆದಿದ್ದರಿಂದ ಮೃತದೇಹದ ವಾಸನೆ ಬರುತ್ತಿದ್ದು ಭಯಭೀತರಾದ ಪ್ರೊ.ದಾಸ್ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಬೀಗ ಒಡೆದು ಪರಿಶೀಲನೆ ನಡೆಸಿದಾಗ ಅಮಾನುಷವಾಗಿ ತ್ರಿವಳಿ ಕೊಲೆ ನಡೆದಿರುವುದು ಪತ್ತೆಯಾಗಿತ್ತು. ದಾಸ್ ಅವರು ಶ್ರೀಮಂತರಾಗಿದ್ದು ಅವರ ಮನೆಯಲ್ಲಿ ಹಣ, ಒಡವೆಗಳನ್ನು ದೋಚಲು ಇಲ್ಲವೇ ಇನ್ನಾವುದೇ ಕಾರಣಕ್ಕೆ ಕೊಲೆ ನಡೆದಿದೆ ಎನ್ನುವುದು ಸದ್ಯಕ್ಕೆ ತಿಳಿದು ಬಂದಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ