ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ದಯಮಾಡಿ ಶಾಸಕರನ್ನು ಹುಡುಕಿಕೊಡಿ-ಠಾಣೆಯಲ್ಲಿ ದೂರು! (BJP | Yeddyurappa | Shivmoga | Beluru gopal krishna)
Feedback Print Bookmark and Share
 
ND
'ನಮ್ಮ ಶಾಸಕರು ಕಾಣೆಯಾಗಿದ್ದಾರೆ, ದಯಮಾಡಿ ಅವರನ್ನು ಹುಡುಕಿ ಕೊಡಿ'...ಹಾಗಂತ ಸ್ವತಃ ಸಾಗರದ ಮತದಾರ ಜಾಗೃತಿ ವೇದಿಕೆ ಸ್ಥಳೀಯ ಠಾಣೆಯಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ವಿರುದ್ಧ ದೂರು ದಾಖಲಿಸಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಬಂಡಾಯದ ರಣಕಹಳೆ ಮೊಳಗಿಸಿರುವ ಬಳ್ಳಾರಿ ಗಣಿಧಣಿಗಳ ಪಾಳಯದಲ್ಲಿ ಗುರುತಿಸಿಕೊಂಡಿರುವ ಸಾಗರದ ಶಾಸಕ ಬೇಳೂರು ಗೋಪಾಲಕೃಷ್ಣ ಕಳೆದ ಒಂದು ವಾರದಿಂದ ಹೈದರಾಬಾದ್‌ನ ನವೋಟಲ್ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ.

ತಮ್ಮ ಸ್ವ ಕ್ಷೇತ್ರವನ್ನು ಮರೆತು ಹೈದರಾಬಾದ್‌ನಲ್ಲಿ ಠಿಕಾಣಿ ಹೂಡಿರುವ ಶಾಸಕರ ವಿರುದ್ಧ ಇಲ್ಲಿನ ಮತದಾರ ಜಾಗೃತಿ ವೇದಿಕೆ ಕಾರ್ಯಕರ್ತರು ನಮ್ಮ ಶಾಸಕರನ್ನು ಹುಡುಕಿಕೊಡಿ ಅಂತ ಲಿಖಿತ ದೂರೊಂದನ್ನು ಬುಧವಾರ ದಾಖಲಿಸಿದೆ. ಬಲವಂತವಾಗಿ ನಮ್ಮ ಶಾಸಕರನ್ನು ಹೋಟೆಲ್‌ವೊಂದರಲ್ಲಿ ಒತ್ತೆಯಾಳಾಗಿ ಇರಿಸಿಕೊಳ್ಳಲಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ನಾನು ನಾಪತ್ತೆಯಾಗಿಲ್ಲ-ಬೇಳೂರು:ಯಾರೋ ಮಾಧ್ಯಮಗಳನ್ನು, ಟಿವಿಯನ್ನು ನೋಡದ ಕಿಡಿಗೇಡಿಗಳು ಈ ರೀತಿ ದೂರು ಕೊಟ್ಟಿರಬೇಕು. ನಾನು ಕಳೆದ ಒಂದು ವಾರದಿಂದ ಹೈದರಾಬಾದ್‌ನಲ್ಲಿ ಇರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೂ ನನ್ನ ವಿರುದ್ಧ ಯಾರೋ ಉದ್ದೇಶಪೂರ್ವಕವಾಗಿ ತಲೆ ಸರಿ ಇಲ್ಲದವರು ಕಾಣೆಯಾಗಿರುವುದಾಗಿ ಠಾಣೆಯಲ್ಲಿ ದೂರು ನೀಡಿರಬೇಕು ಎಂದು ಖಾಸಗಿ ಟಿವಿ ವಾಹಿನಿಯೊಂದರ ಜತೆ ಬೇಳೂರು ಮಾತನಾಡುತ್ತ ಪ್ರತಿಕ್ರಿಯೆ ನೀಡಿದ್ದಾರೆ.

ಸಾಗರದಲ್ಲಿ ಅಂತಹದ್ದೇನೂ ಸಂಭವಿಸಿಲ್ಲ, ಅಲ್ಲದೆ, ಒಂದು ವಾರಗಳ ಕಾಲ ಸಾಗರದಲ್ಲಿಯೇ ಇದ್ದಿದ್ದೇನೆ. ನನ್ನ ಮೇಲೆ ಉದ್ದೇಶಪೂರ್ವಕವಾಗಿಯೇ ಇಂತಹ ದೂರು ನೀಡಿರಬೇಕು ಎಂದು ದೂರಿದರು.
ಸಂಬಂಧಿತ ಮಾಹಿತಿ ಹುಡುಕಿ