ನಾಯಕತ್ವ ಬದಲಾವಣೆ ಸಾಧ್ಯವೇ ಇಲ್ಲ ಎಂದು ಹೇಳಿರುವ ಕೆಲ ಸಚಿವರು ಒಂದು ವೇಳೆ ಇದಕ್ಕೆ ಭಿನ್ನರು ಹಠ ಮಾಡಿದರೆ, ಹೊಸ ನಾಯಕತ್ವದಲ್ಲೇ ಚುನಾವಣೆ ಎದುರಿಸಲಿ ಎಂದು ಸವಾಲು ಹಾಕಿದ್ದಾರೆ.
ಸಚಿವರಾದ ಹಾಲಪ್ಪ, ಉಮೇಶ್ ಕತ್ತಿ, ಬಿ.ಎನ್.ಬಚ್ಚೇಗೌಡ ಸೇರಿದಂತೆ ಇತರ ಶಾಸಕರು ಬುಧವಾರ ವಿಧಾನಸೌಧದಲ್ಲಿ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದರು.
'ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯಡಿಯೂರಪ್ಪ ಅವರೇ ನಮ್ಮ ಮುಖ್ಯಮಂತ್ರಿ ಎಂದು ಬಿಂಬಿಸಿ, 117 ಸ್ಥಾನ ಗೆದ್ದಿದ್ದೇವೆ. ಅವರನ್ನು ಯಾರೊ ಕೆಲವರು ಬದಲಿಸಬೇಕು ಎಂದು ಹೇಳಿದ ತಕ್ಷಣ ಹಾಗೆ ಮಾಡುವುದು ಸರಿ ಅಲ್ಲ. ಇದನ್ನು ಹೈಕಮಾಂಡ್ ಕೂಡ ಗಮನಿಸಬೇಕು ಎಂದು ಹಾಲಪ್ಪ ಹೇಳಿದರು.
ಐದು ವರ್ಷ ಆಡಳಿತ ನಡೆಸಲು ಜನ ಯಡಿಯೂರಪ್ಪ ಅವರಿಗೆ ಅಧಿಕಾರ ನೀಡಿದ್ದಾರೆ. ಹೀಗಾಗಿ ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡುವುದು ಜನರ ತೀರ್ಪಿಗೆ ದ್ರೋಹ ಬಗೆದಂತೆ ಎಂದು ತಿಳಿಸಿದ್ದಾರೆ.