ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ನಾನು ಪ್ರಚಾರ ಪ್ರಿಯನಲ್ಲ: ಸಚಿವ ಗೂಳಿಹಟ್ಟಿ (BJP | Yeddyurappa | Bangalore | Karnataka | gooilhatti)
Bookmark and Share Feedback Print
 
ಸಚಿವನಾಗಿ ಯಾವ ಕೆಲಸವನ್ನೂ ಮಾಡಲಾಗಲಿಲ್ಲ ಎಂದು ಪ್ರತಿ ಬಾರಿ ಹೇಳಿಕೆ ನೀಡುತ್ತಿದ್ದ ಕ್ರೀಡೆ, ಯುವಜನ ಸೇವೆ ಮತ್ತು ಜವಳಿ ಸಚಿವ ಗೂಳಿಹಟ್ಟಿ ಶೇಖರ್, ಇದ್ದಕ್ಕಿದ್ದಂತೆ ತಮ್ಮ ವರಸೆಯನ್ನು ಬದಲಾಯಿಸಿದ್ದಾರೆ. ಕಳೆದ 18 ತಿಂಗಳಿಂದ ಪ್ರಚಾರ ಬಯಸದೆ ಸಾಕಷ್ಟು ಕೆಲಸ ಮಾಡಿದ್ದೇನೆ ಎನ್ನುವುದರ ಮೂಲಕ ದಿಢೀರ್ ಪ್ರಚಾರಕ್ಕೆ ಬರಲು ಮುಂದಾಗಿಬಿಟ್ಟಿದ್ದಾರೆ.

ಅವರು ಇದ್ದಕ್ಕಿದ್ದಂತೆ ಮಾಧ್ಯಮ ಮಿತ್ರರೊಂದಿಗೆ ಮಾತನಾಡಲು ಬಯಸಿದರು. ನಾನು ಜವಳಿ ಸಚಿವನಾಗಿ ಮಾಡಿರುವ ಕೆಲಸ ಅಪಾರ. ನೇಕಾರರ ಸಮಸ್ಯೆಗಳಿಗೆ ಸ್ಪಂದಿಸಿ ಅವರ ಕಷ್ಟಗಳನ್ನು ದೂರ ಮಾಡಲು ಪ್ರಯತ್ನಿಸಿದ್ದೇನೆ ಎಂದರು. ಇದೆಲ್ಲ ಈಗೇಕೆ ? ಎಂಬ ಸುದ್ದಿಗಾರರ ಪ್ರಶ್ನೆಗೆ ಶೇಖರ್, ನಾನು ಕೆಲಸ ಮಾಡುತ್ತಿಲ್ಲ ಎಂಬ ಆಪಾದನೆ ಕೇಳಿ ಬರುತ್ತಿದೆ ಎಂದರು.

ನಾನು ಪ್ರಚಾರ ಪ್ರಿಯನಲ್ಲ. ಸದ್ದಿಲ್ಲದೆ ಹಲವಾರು ಜನೋಪಯೋಗಿ ಕಾರ್ಯ ಮಾಡಿದ್ದೇನೆ. ಸಚಿವನಾಗಿ 18 ತಿಂಗಳ ಅವಧಿಯಲ್ಲಿ ಮಾಡಿರುವ ಕೆಲಸವನ್ನು ಮಾಧ್ಯಮದವರಿಗೆ ಹೇಳಿ ನನ್ನ ಮೇಲಿರುವ ಆಪಾದನೆಯಿಂದ ಮುಕ್ತನಾಗಬೇಕಾಗಿದೆ ಎಂದು ತಮ್ಮ ಸಾಧನೆಗಳ ಪಟ್ಟಿಯನ್ನು ವಿವರಿಸುತ್ತಾ ಹೋದರು.

ಜವಳಿ ಇಲಾಖೆ ಸಮಸ್ಯೆ, ನೇಕಾರರ ವೇತನ ಹೆಚ್ಚಳ ಹಾಗೂ ಗ್ರಾಮೀಣ ಅಭ್ಯರ್ಥಿಗಳ ಉದ್ಯೋಗಕ್ಕೆ ಮಾಡಿಕೊಂಡ ಒಪ್ಪಂದ ಹೀಗೆ ಹಲವಾರು ಕಾರ್ಯಗಳನ್ನು ಮಾಡಿರುವುದಾಗಿ ಶೇಖರ್ ತಮ್ಮ ಬಗ್ಗೆ ಹೇಳಿಕೊಂಡರು. ಗೂಳಿ ಹಟ್ಟಿ ಶೇಖರ್ ವಿರುದ್ಧ ಆರೋಪ ಮಾಡಿದವರಾರು? ಎಂಬುದನ್ನು ಕೊನೆಗೂ ತಿಳಿಸಲಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ