ಹಿಂದು ಧರ್ಮದ ಹುಡುಗಿಯನ್ನು ಅಪಹರಿಸಿದ ಮುಸ್ಲಿಂ ಹುಡುಗನೊಬ್ಬ ಬಲವಂತವಾಗಿ ಮದುವೆಯಾಗಿರುವ ಪ್ರಕರಣ ಕೋಲಾರದಿಂದ ವರದಿಯಾಗಿದೆ. ಇದೀಗ ಈ ಪ್ರಕರಣ ಲವ್ ಜಿಹಾದ್ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ವೈಶ್ಯ ಜನಾಂಗಕ್ಕೆ ಸೇರಿದ ಪ್ರೀತಿ(19) ಎಂಬಾಕೆ ಹತ್ತು ದಿನಗಳ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದಳು. ಆಕೆಯ ತಂದೆ ಪೊಲೀಸರಿಗೆ ದೂರನ್ನೂ ನೀಡಿದ್ದರು. ಪ್ರೀತಿಯ ಮೊಬೈಲ್ಗೆ ಕೋಲಾರದಲ್ಲಿ ಮೊಬೈಲ್ ಅಂಗಡಿ ಇಟ್ಟಿರುವ ಇಮ್ರಾನ್ ಹಲವು ಕರೆಗಳನ್ನು ಮಾಡಿದ್ದ ಎಂಬುದು ತನಿಖೆಯಿಂದ ತಿಳಿದು ಬಂದಿತ್ತು. ಈ ಜೋಡಿ ಗುಲ್ಬರ್ಗಾದಲ್ಲಿ, ಹೈದರಾಬಾದ್ ಬಸ್ ಹತ್ತಬೇಕೆನ್ನುವಷ್ಟರಲ್ಲಿ ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು.
ಕೆಜಿಎಫ್ನಲ್ಲಿ ಪೊಲೀಸ್ ಅಧಿಕಾರಿಯಾದ ಸಯೀದ್ ಹೈದರ್ ಪುತ್ರನಾಗಿರುವ ಇಮ್ರಾನ್, ಪ್ರೀತಿಯನ್ನು ಬಲವಂತವಾಗಿ ಮನೆಯಿಂದ ಕರೆದೊಯ್ದು ಆಕೆಯ ಮೊಬೈಲ್ ಕಿತ್ತುಕೊಂಡು ಬೆದರಿಕೆ ಹಾಕಿದ್ದು, ನಂತರ ಮಸೀದಿಯೊಂದರಲ್ಲಿ ಮದುವೆಯಾಗಿದ್ದ. ನಂತರ ಆಕೆಗೆ ಬುರ್ಖಾ ಧರಿಸಬೇಕೆಂದು ಇಮ್ರಾನ್ ಬಲವಂತ ಮಾಡಿ, ಕೆಲವು ಕಾಗದ ಪತ್ರಗಳಿಗೆ ಆಕೆಯಿಂದ ಸಹಿ ಹಾಕಿಸಿಕೊಂಡಿರುವುದಾಗಿ ಪ್ರೀತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.
ಇದೀಗ ಇಮ್ರಾನ್ ನ್ಯಾಯಾಂಗ ಬಂಧನದಲ್ಲಿದ್ದು, ತಾನು ಪ್ರೀತಿಯನ್ನು ಮನಸಾರೆ ಪ್ರೀತಿಸುತ್ತಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾನೆ. ಈ ಪ್ರಕರಣದಿಂದ ಮತ್ತೊಮ್ಮೆ ಲವ್ ಜಿಹಾದ್ ಎಂಬ ಬೆಂಕಿಗೆ ತುಪ್ಪ ಸುರಿದಂತಾಗಿದೆ.