ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಿಜೆಪಿ ತಪ್ಪು ತಿದ್ದುಕೊಳ್ಲಿ,ಇಲ್ಲದಿದ್ರೆ ಪಾಠ ಕಲಿಸ್ತೇವೆ: ಕಾಂಗ್ರೆಸ್ (BJP | Congress | Mallikarjuna Kharge | Yeddyurappa)
Bookmark and Share Feedback Print
 
NRB
ಕ್ಷೇತ್ರಗಳ ಅಭಿವೃದ್ಧಿಯತ್ತ ಗಮನಹರಿಸುವುದನ್ನು ಬಿಟ್ಟು ಆಂತರಿಕ ಕಚ್ಚಾಟದಲ್ಲೇ ತೊಡಗಿರುವ ಆಡಳಿತಾರೂಢ ಬಿಜೆಪಿ ಪಕ್ಷ ತನ್ನ ತಪ್ಪು ತಿದ್ದಿಕೊಳ್ಳದಿದ್ದರೆ ಕಾಂಗ್ರೆಸ್ ಪಕ್ಷ ತಕ್ಕ ಪಾಠ ಕಲಿಸುತ್ತದೆ ಎಂದು ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಎಚ್ಚರಿಕೆ ನೀಡಿದ್ದಾರೆ.

ಕೆಪಿಸಿಸಿ ವತಿಯಿಂದ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ 125ನೇ ಸಂಸ್ಥಾಪನಾ ದಿನಾಚರಣೆ ಸಂದರ್ಭದಲ್ಲಿ ಮಾತನಾಡಿದರು.

ಬಿಜೆಪಿ ಪಕ್ಷ ತನ್ನ ಆಂತರಿಕ ಕಚ್ಚಾಟದಿಂದ ಹೊರಬರದಿದ್ದರೆ, ಕಾಂಗ್ರೆಸ್ ಪಂಚಾಯತ್ ಮಟ್ಟದಿಂದ ಕೆಪಿಸಿಸಿವರೆಗೂ ಹೋರಾಟ ನಡೆಸಲು ಸಿದ್ದವಿದೆ. ಜನರ ಕಲ್ಯಾಣ ಮರೆತರೆ ಯಾವುದೇ ಪಕ್ಷ ಉಳಿಯುವುದಿಲ್ಲ ಎಂದು ಕಿಡಿಕಾರಿದರು.

ಒಳಜಗಳ,ಕಚ್ಚಾಟ,ಕುರ್ಚಿ ಆಸೆಗಾಗಿ ಬಿಜೆಪಿ ಪಕ್ಷ ಕಾಲ ಕಳೆಯುತ್ತಿದೆ. ಜನರ ಹಿತಾಸಕ್ತಿಗಳನ್ನು ಮರೆತರೆ ಕಾಂಗ್ರೆಸ್ ಪಕ್ಷ ಕಣ್ಮುಚ್ಚಿ ಕೂರುವುದಿಲ್ಲ. ಕಾಲ ಬಂದಾಗ ಆಡಳಿತಾರೂಢ ಪಕ್ಷಕ್ಕೆ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ