'ಶಿವಕುಮಾರ್...ಶಿವಕುಮಾರ್...ಮಧ್ಯದಲ್ಲಿ ಮಾತನಾಡ್ಬೇಡಪ್ಪಾ,ನೀನೇ ಹೀಗೆ ಮಾಡಿದ್ರೆ ಹೇಗೆ? ಭಾಷಣ ಮಾಡ್ಲಿಕ್ಕೆ ಅವಕಾಶ ಕೊಟ್ಟ ಮೇಲೆ ಸುಮ್ಮನಿರಬೇಕು. ನೀವೇ ಮಾತನಾಡುತ್ತಿದ್ದರೆ ಬೇರೆಯವರು ಕೇಳ್ತಾರಾ...ಸ್ವಲ್ಪ ಶಿಸ್ತಿನಿಂದರು' ಹೀಗೆ ಶಿಸ್ತಿನ ಪಾಠ ಬಹಿರಂಗವಾಗಿಯೇ ಹೇಳಿಕೊಟ್ಟವರು ರೈಲ್ವೆ ಸಚಿವ ಕೆ.ಎಸ್.ಮುನಿಯಪ್ಪ!
ಸಂದರ್ಭ: ಕೆಪಿಸಿಸಿ ವತಿಯಿಂದ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ 125ನೇ ಸಂಸ್ಥಾಪನಾ ದಿನಾಚರಣೆ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮುನಿಯಪ್ಪ ಅವರು ಮಾತನಾಡುತ್ತಿದ್ದಾಗ, ಇತ್ತ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ಡಿ.ಕೆ.ಶಿವಕುಮಾರ್ ಅವರು ಸಿದ್ದರಾಮಯ್ಯ ಮತ್ತು ರಾಮದುರ್ಗ ಶಾಸಕ ಅಶೋಕ್ ಜೊತೆ ಹರಟೆಯಲ್ಲಿ ತೊಡಗಿದ್ದರು. ಇದರಿಂದ ಮುನಿಯಪ್ಪ ಭಾಷಣಕ್ಕೆ ಅಡ್ಡಿಯಾಗಿತ್ತು.
ತಕ್ಷಣವೇ ಡಿಕೆಶಿ ತಿರುಗಿದ ಮುನಿಯಪ್ಪ ಶಿವಕುಮಾರ್ ಅವರಿಗೆ ಬಹಿರಂಗ ಸಭೆಯಲ್ಲಿಯೇ ಶಿಸ್ತಿನ ಪಾಠ ಹೇಳಿಕೊಟ್ಟರು. ಮುನಿಯಪ್ಪ ಅವರು ಮಾತಿನ ನಂತರ ಡಿಕೆಶಿ ಗಪ್ಚುಪ್ ಆದರು. ಬಳಿಕ ಮುನಿಯಪ್ಪ ತಮ್ಮ ಭಾಷಣವನ್ನು ಮುಂದುವರಿಸಿದರು.