ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ತೀವ್ರ ಹದಗೆಟ್ಟ ಕೆ.ಎಸ್.ಅಶ್ವತ್ಥ್ ದೇಹಸ್ಥಿತಿ! (K.S.Ashwath | Kannada Cinema | Nagarahavu)
Bookmark and Share Feedback Print
 
ಹಿರಿಯ ನಟ, 'ನಾಗರಹಾವು' ಚಿತ್ರದ 'ಚಾಮಯ್ಯ ಮೇಷ್ಟ್ರು' ಖ್ಯಾತಿಯ ಕೆ.ಎಸ್.ಅಶ್ವತ್ಥ್ ಅವರು ತೀವ್ರ ಅಸ್ವಸ್ಥರಾಗಿದ್ದು, ಅವರ ದೇಹ ಸ್ಥಿತಿ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದು ಕೃತಕ ಉಸಿರಾಟ ವ್ಯವಸ್ಥೆಯ ಮೂಲಕ ಉಸಿರಾಡುತ್ತಿದ್ದಾರೆ ಎಂದು ವೈದ್ಯ ಮೂಲಗಳು ತಿಳಿಸಿವೆ.

ಮೈಸೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಶ್ವತ್ಥ್, ಮೆದುಳಿನ ನರದ ತೊಂದರೆಯಿಂದ ಬಳಲುತ್ತಿದ್ದಾರೆ. ಅಶ್ವತ್ಥ್ ಅವರನ್ನು ಭೇಟಿಯಾಗಲು ಪ್ರತಿದಿನವೂ ಚಿತ್ರರಂಗದ ದಿಗ್ಗಜರು ಭೇಟಿಯಾಗುತ್ತಿದ್ದು, ಕುಟುಂಬಕ್ಕೆ ಧೈರ್ಯ ಹೇಳುತ್ತಿದ್ದಾರೆ. ಮಗ, ನಟ ಶಂಕರ್ ಅಶ್ವತ್ಥ್ ಅಪ್ಪನ ಆರೋಗ್ಯ ಹದಗೆಟ್ಟಿರುವುದರಿಂದ ಅಧೀರರಾಗಿದ್ದು, ಅವರಿಗೆ ಹಲವರು ಧೈರ್ಯ ಹೇಳುತ್ತಿದ್ದಾರೆ.

ಇತ್ತೀಚೆಗಷ್ಟೆ ಮೂರು ದಿನಗಳ ಹಿಂದೆ, ಅಶ್ವತ್ಥ್ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಗಸ್ವತಃ ತನ್ನ ಪತ್ನಿಯನ್ನೇ ಗುರುತಿಸಲಾಗದಷ್ಟು ಆರೋಗ್ಯ ಹದಗೆಟ್ಟಿತ್ತು. ಆದರೆ ನಂತರ ಕೊಂಚ ಸುಧಾರಣೆ ಕಂಡಿದ್ದು, ವೈದ್ಯರ ಹತೋಟಿಗೆ ಬಂದಿತ್ತು. ಆದರೆ ಈಗ ಮತ್ತೆ ಆರೋಗ್ಯ ತೀವ್ರ ಹದಗೆಟ್ಟಿದೆ ಎಂದು ಮೂಲಗಳು ತಿಳಿಸಿವೆ.

ಚಿತ್ರರಂಗದಲ್ಲಿನ ಇವರ ಸೇವೆಗೆ ತುಮಕೂರು ವಿವಿಯ ಗೌರವ ಡಾಕ್ಟರೇಟ್ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಅಶ್ವತ್ಥ್ ಭಾಜನರಾಗಿದ್ದರು. ಡಾ.ವಿಷ್ಣುವರ್ಧನ್ ಜೊತೆಗೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದ ಅಶ್ವತ್ಥ್, ಇತ್ತೀಚೆಗೆ ಡಾ.ವಿಷ್ಣು ಅವರ ನಿಧನದಿಂದ ತೀವ್ರ ನೊಂದಿದ್ದರು ಎನ್ನಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ