ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಪ್ರೇಮ ಪುರಾಣ: ಪತ್ನಿಯಿಂದಲೇ ಗಂಡನ ಕೊಲೆಗೆ ಸುಪಾರಿ! (Bangalore | Love | Police | Karnataka)
Bookmark and Share Feedback Print
 
ಪ್ರಿಯತಮನ ಪ್ರೀತಿ ಮತ್ತು ಆಸ್ತಿ ತನಗೆ ದಕ್ಕಬೇಕಾದರೆ ಅದಕ್ಕೆ ಅಡ್ಡಿಯಾಗಿರುವ ಗಂಡನನ್ನೇ ಮುಗಿಸುವುದು...ಹಾಗೇ ಪ್ರೇಮಿಯ ಜೊತೆ ಸೇರಿ ಗಂಡನ ಹತ್ಯೆಗೆ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದ ಪತ್ನಿ ಇದೀಗ ಜೈಲು ಕಂಬಿ ಎಣಿಸುತ್ತಿರುವ ಘಟನೆ ತಲಘಟ್ಟಪುರ ಠಾಣಾ ವ್ಯಾಪ್ತಿಯ ಅವಲಹಳ್ಳಿಯಲ್ಲಿ ನಡೆದಿದೆ.

ಘಟನೆ ವಿವರ: ಅವಲಹಳ್ಳಿಯಲ್ಲಿ ಕೋಳಿಮೊಟ್ಟೆ ತರಲು ಹೋದಾಗ ಮಗನ ಮುಂದೆಯೇ ನಾಗರಾಜ್ ಎಂಬುವರನ್ನು ಹತ್ಯೆಗೈಯಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಪಿಐ ಮಹದೇವ್ ಅವರು ತನಿಖೆ ನಡೆಸುತ್ತಿದ್ದ ವೇಳೆ ಮೃತ ನಾಗರಾಜ್ ಅವರು ಮೊಬೈಲ್ ಕರೆ ದಾಖಲೆ ಪರಿಶೀಲಿಸಿದಾಗ ಪ್ರೇಮ ಪುರಾಣ ಹೊರಬಿದ್ದಿತ್ತು. ಇದೀಗ ಕೊಲೆ ಮಾಡಿಸಿದ್ದ ಪತ್ನಿ ಪರಿಮಳ, ಆಕೆಯ ಪ್ರಿಯಕರ ಸಂತೋಷ್ ಪೊಲೀಸರ ಅತಿಥಿಯಾಗಿದ್ದಾರೆ.

ನಾಗರಾಜ್ ಅವರ ಅಕ್ಕನ ಮಗ ಸಂತೋಷ್ ಜೊತೆ ಪರಿಮಳ ಅಕ್ರಮ ಸಂಬಂಧ ಹೊಂದಿದ್ದಳು, ಈ ಕಾರಣಕ್ಕಾಗಿಯೇ ಪತಿ-ಪತ್ನಿಯರ ನಡುವೆ ಜಟಾಪಟಿ ನಡೆಯುತ್ತಿತ್ತು. ಅಲ್ಲದೇ ನಾಗರಾಜನಿಗೆ ಪಿತ್ರಾರ್ಜಿತ ಆಸ್ತಿ ಇದ್ದು, ಈ ಆಸ್ತಿ ಮಾರಿ ಬರುವ ಹಣದಲ್ಲಿ ಅಕ್ಕ-ತಂಗಿಯರಿಗೆ ಸ್ವಲ್ಪ ಹಣ ಕೊಡಲು ನಿರ್ಧರಿಸಿದ್ದ.

ಒಂದೆಡೆ ಪ್ರೇಮಪಾಶ, ಇನ್ನೊಂದೆಡೆ ಹಣ ಒಟ್ಟಾರೆ ಆಸ್ತಿ ಮತ್ತು ಪ್ರೀತಿ ದಕ್ಕಬೇಕಾದರೆ ಪತಿಯ ಹತ್ಯೆ ನಡೆಯಲೇಬೇಕು ಎಂದು ನಿರ್ಧರಿಸಿದ ಪರಿಮಳ, ಮೂರು ತಿಂಗಳ ಹಿಂದೆ ಸಂತೋಷ್ ಜೊತೆ ಸೇರಿ ಸ್ಕೆಚ್ ರೆಡಿ ಮಾಡಿದ್ದಳು!.ಅದರಂತೆ ತಮಿಳುನಾಡಿನ ಇಬ್ಬರು ಹಂತಕರಿಗೆ 20ಸಾವಿರ ರೂಪಾಯಿ ನೀಡಿ ಪತಿ ನಾಗರಾಜ್ ಕೊಲೆಗೆ ಸುಪಾರಿ ಕೊಟ್ಟಿದ್ದರು. ಹೀಗೆ ಗಂಡನ ಕೊಲೆಯಾದ ನಂತರ ಅಮಾಯಕಿಯಂತೆ ನಟಿಸಿದ್ದ ಪರಿಮಳ ಪೊಲೀಸರಿಗೆ ದೂರು ನೀಡಿದ್ದಳು.

ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ಪೊಲೀಸರು ನಾಗರಾಜ್ ಅವರ ಮೊಬೈಲ್ ಪರಿಶೀಲಿಸಿದ ನಂತರ ಪರಿಮಳ ಮತ್ತು ಸಂತೋಷನನ್ನು ತೀವ್ರ ವಿಚಾರಣೆಗೆ ಗುರಿಪಡಿಸಿದ್ದರು. ಆಗ ಕೊಲೆಯ ಸತ್ಯಾಂಶ ಹೊರಬಿದ್ದಿತ್ತು. ಪೊಲೀಸರ ಅತಿಥಿಯಾಗಿರುವ ಇಬ್ಬರ ವಿರುದ್ಧ ತಲಘಟ್ಟ ಠಾಣೆಯಲ್ಲಿ ದೂರು ದಾಖಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ