ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಿಬಿಎಂಪಿ ಚುನಾವಣಾ ಅಖಾಡಕ್ಕೆ ಕರವೇ ಅಭ್ಯರ್ಥಿಗಳು (BBMP | Kannada vedike | Narayana gowda | BJP | Congress)
Bookmark and Share Feedback Print
 
ಕನ್ನಡಪರ ಸಂಘಟನೆಯಾದ ಕರ್ನಾಟಕ ರಕ್ಷಣಾ ವೇದಿಕೆ ಪ್ರಥಮ ಬಾರಿಗೆ ಬಿಬಿಎಂಪಿ ಚುನಾವಣಾ ಅಖಾಡಕ್ಕೆ 7ಮಂದಿ ಅಭ್ಯರ್ಥಿಗಳು ಶುಕ್ರವಾರ ನಾಮಪತ್ರ ಸಲ್ಲಿಸಿದರು.

ಟಿ.ಎ.ನಾರಾಯಣಗೌಡ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲಿತ ಏಳು ಮಂದಿ, ಕನ್ನಡಿಗನೇ ಸೌರ್ವಭೌಮ ಎಂಬ ಘೋಷವಾಕ್ಯದೊಂದಿಗೆ ಅಖಾಡಕ್ಕಿಳಿದಿದ್ದಾರೆ.

ಆ ನಿಟ್ಟಿನಲ್ಲಿ ದೊಡ್ಡಬಿದರಕಲ್ಲು ವಾರ್ಡ್‌ನಿಂದ ಎಂ.ರೇಣುಕಾಶಿವರಾಜ್, ಗಾಯತ್ರಿನಗರದಿಂದ ರಾಧಮಣಿ ನಾಗೇಂದ್ರಬಾಬು, ಲಿಂಗರಾಜಪುರ-ಸಾಕ್ಷಿಗೌಡ, ಜರಗನಹಳ್ಳಿ-ಮಂಜುಳಾನಾಗರಾಜ್, ಡಾ.ರಾಜ್‌ಕುಮಾರ್ ವಾರ್ಡ್‌ನಿಂದ ಎ.ಎಸ್.ನಾಗರಾಜ್, ಬಾಣಸವಾಡಿ-ಆರ್.ರಾಜಗೋಪಾಲ್ ಹಾಗೂ ನಂದಿನಿ ಬಡಾವಣೆ- ಜಿ.ನಂಜುಂಡಯ್ಯ ನಾಮಪತ್ರ ಸಲ್ಲಿಸಿದ್ದಾರೆ.

ಕನ್ನಡಕ್ಕೆ ಮತ್ತು ಕನ್ನಡಿಗರಿಗೆ ಸೂಕ್ತ ಸ್ಥಾನಮಾನ ದೊರೆಕಿಸಿ ಕೊಡಲು ಚುನಾವಣಾ ಅಖಾಡಕ್ಕೆ ಇಳಿಯುವುದಾಗಿ ಈ ಮೊದಲೇ ನಾರಾಯಣಗೌಡ ಘೋಷಿಸಿದ್ದರು. ಅದಕ್ಕೆ ಮೊದಲ ಪ್ರಯತ್ನ ಎಂಬಂತೆ ಕರವೇಯ ಅಭ್ಯರ್ಥಿಗಳನ್ನು ಬಿಬಿಎಂಪಿ ಚುನಾವಣಾ ಅಖಾಡಕ್ಕೆ ಇಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ