ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ರೌಡಿ ಸಂಸ್ಕೃತಿ,ರಾಜಕಾರಣದಲ್ಲಿ ಶ್ರೀರಾಮುಲು ಬಚ್ಚಾ: ಸಿದ್ದರಾಮಯ್ಯ (Siddaramaiah | Sri ramulu | Congress | KPCC | BJP | Yeddyurappa)
Bookmark and Share Feedback Print
 
ಕಾಂಗ್ರೆಸ್ ಪಾದಯಾತ್ರೆ ಹಾಗೂ ಪಕ್ಷವನ್ನು ಟೀಕಿಸಿರುವ ರೆಡ್ಡಿ ಸಹೋದರರ ವಿರುದ್ಧ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದು, ರಾಜಕಾರಣದಲ್ಲಿ ಶ್ರೀರಾಮುಲು ಬಚ್ಚಾ. ದುಡ್ಡು ಮಾಡಲಿಕ್ಕಾಗಿ ರಾಜಕಾಣರಕ್ಕೆ ಬಂದ ರೆಡ್ಡಿಗಳು ನಮಗೆ ಬುದ್ದಿ ಹೇಳುವ ಅಗತ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

ಅಕ್ರಮ ಗಣಿಗಾರಿಕೆ ವಿರುದ್ಧ ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ಪಾದಯಾತ್ರೆ ಗುರುವಾರ ಐದನೆ ದಿನಕ್ಕೆ ಕಾಲಿಟ್ಟಿದ್ದು, ಪಾದಯಾತ್ರೆ ತುಮಕೂರಿನತ್ತ ಸಾಗಿ, ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ನಂತರ ಸಿದ್ದರಾಮಯ್ಯ ಸುದ್ದಿಗಾರರೊಂದಿಗೆ ಮಾತನಾಡುತ್ತ ಈ ರೀತಿಯಾಗಿ ಪ್ರತಿಕ್ರಿಯಿಸಿದರು.

ರೆಡ್ಡಿಗಳದ್ದು ರೌಡಿ ಸಂಸ್ಕೃತಿಯ ರಾಜಕಾರಣ, ಅಂತಹ ಜನಗಳಿಂದ ನಾವು ಬಹುವಚನ, ಸಂಸ್ಕೃತಿಯನ್ನು ನಿರೀಕ್ಷಿಸುವುದು ಹೇಗೆ ಎಂದು ಅವರು ಪ್ರಶ್ನಿಸಿದರು. ರೆಡ್ಡಿಗಳ ಹಣಬಲದಿಂದ ಬಿಜೆಪಿ ಮುಖಂಡರು ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಅಲ್ಲದೆ, ರೆಡ್ಡಿ ಸಹೋದರರಿಂದ ಬಳ್ಳಾರಿ ಅಭಿವೃದ್ದಿಯಾಗಿಲ್ಲ. ಕಾಂಗ್ರೆಸ್ ಆಡಳಿತಾವಧಿಯಲ್ಲೇ ಬಳ್ಳಾರಿ ಅಭಿವೃದ್ದಿಯಾಗಿದೆ ಎಂದು ಸಮಜಾಯಿಷಿ ನೀಡಿದರು.

ಬಳ್ಳಾರಿಗೆ ಬನ್ನಿ, ಬಳ್ಳಾರಿ ಅಭಿವೃದ್ಧಿಯಾಗಿಲ್ಲ ಎಂದು ಬಾಯಿಗೆ ಬಂದಂತೆ ರೆಡ್ಡಿ ಸಹೋದರರು ಮಾತನಾಡುತ್ತಿದ್ದಾರೆ, ಬಳ್ಳಾರಿ ರೆಡ್ಡಿಗಳದ್ದಲ್ಲ, ಶಿವಮೊಗ್ಗ ಬಿ.ಎಸ್.ಯಡಿಯೂರಪ್ಪನವರದ್ದೂ ಅಲ್ಲ ಎಂದು ತಿರುಗೇಟು ನೀಡಿದರು.

ಕಾಂಗ್ರೆಸ್ ಪಕ್ಷದ ಪಾದಯಾತ್ರೆಗೆ ಜನರು ಪೂರ್ಣ ಪ್ರಮಾಣದಲ್ಲಿ ಬೆಂಬಲ ನೀಡಿದ್ದಾರೆ. ಬಳ್ಳಾರಿಯಲ್ಲಿ ಬೃಹತ್ ಸಮಾವೇಶ ನಡೆಸುವುದು ಖಚಿತ. ಒಂದು ವೇಳೆ ಯಾವುದೇ ಅಹಿತಕರ ಘಟನೆ ನಡೆದರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇರ ಹೊಣೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ