ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಪಾದಯಾತ್ರೆ ಆಯ್ತು,ಈಗ ರೆಡ್ಡಿ ಬ್ರದರ್ಸ್ ಹೋಮ ಶುರು! (Somashekar Reddy | Sri ramulu | BJP | Congress | Karnataka)
Bookmark and Share Feedback Print
 
ಪಾದಯಾತ್ರೆ ಮೂಲಕ ಕಾಂಗ್ರೆಸ್ಸಿಗರು ಬಳ್ಳಾರಿ ಪ್ರವೇಶಿಸಿದ್ದರಿಂದ ಬಳ್ಳಾರಿಗೆ ವಕ್ರದೃಷ್ಟಿ ಬಿದ್ದಿದೆ ಎಂದು ಆರೋಪಿಸಿರುವ ರೆಡ್ಡಿ ಸಹೋದರರು ಮಂಗಳವಾರ ಸೋಮಶೇಖರ ರೆಡ್ಡಿ ನೇತೃತ್ವದಲ್ಲಿ ಇಲ್ಲಿನ ಮೋತಿ ಸರ್ಕಲ್ ಸಮೀಪ ಸುಮಾರು 12 ಪುರೋಹಿತರಿಂದ ಹೋಮ ನಡೆಸಿ, ನಗರದಲ್ಲಿ ಗಂಜಲ ಸಿಂಪಡಿಸಿ ಶುದ್ದಿಕರಿಸಿದರು.

ಕಾಂಗ್ರೆಸ್ಸಿಗರ ಆಗಮನದಿಂದ ಬಳ್ಳಾರಿಗೆ ವಕ್ರದೃಷ್ಟಿ ಬಿದ್ದಿದೆ, ಹಾಗಾಗಿ ಬಳ್ಳಾರಿ ನಗರದಲ್ಲಿ ಮೊದಲಿಗೆ ಹೋಮ ನಡೆಸಿ ಶುದ್ದಿ ಮಾಡಿದ ಬಳಿಕ, ಜಿಲ್ಲೆಯಾದ್ಯಂತ ಈ ಶುದ್ದಿ ಕಾರ್ಯಕ್ರಮ ಮುಂದುವರಿಯಲಿದೆ ಎಂದು ಸೋಮಶೇಖರ ರೆಡ್ಡಿ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.

ಇಂದು ಬೆಳಿಗ್ಗೆ ಮೋತಿ ಸರ್ಕಲ್ ಸಮೀಪ ಆಂಧ್ರ ಮತ್ತು ಬಳ್ಳಾರಿಯ ಸುಮಾರು 12 ಮಂದಿ ಪುರೋಹಿತರಿಂದ ನಾಲ್ಕು ಹೋಮ ನಡೆಯಿತು. ಕಾಂಗ್ರೆಸ್ ಪಾದಯಾತ್ರೆ ಎಲ್ಲೆಲ್ಲ ಹಾದು ಹೋಗಿದೆ ಅಲ್ಲೆಲ್ಲ ಶುದ್ದಿ ಮಾಡಲಾಗುವುದು ಎಂದು ರೆಡ್ಡಿ ಹೇಳಿದರು.

ಅಷ್ಟೇ ಅಲ್ಲ, ಹೋಮದ ಪೂರ್ಣಾಹುತಿ ನಂತರ ನಗರದಲ್ಲಿ ಬೃಹತ್ ಆಗಿ ನಿರ್ಮಿಸಿದ್ದ ದೃಷ್ಟಿ ಬೊಂಬೆಯನ್ನು ಸುಡುವ ಕಾರ್ಯಕ್ರಮ ನಡೆಸಲಾಗುವುದು ಎಂದರು. ಬಳ್ಳಾರಿಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಹೋಮ, ಶುದ್ದಿ ಕಾರ್ಯಕ್ರಮ ಮಾಡುತ್ತಿರುವುದಾಗಿಯೂ ಈ ಸಂದರ್ಭದಲ್ಲಿ ವಿವರಿಸಿದರು.ಹೋಮದ ಸಂದರ್ಭದಲ್ಲಿ ಸೋಮಶೇಖರ ರೆಡ್ಡಿ, ಪತ್ನಿ, ಆರೋಗ್ಯ ಸಚಿವ ಶ್ರೀರಾಮುಲು ಸೇರಿದಂತೆ ಬಿಜೆಪಿ ಮುಖಂಡರು ಪಾಲ್ಗೊಂಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ