ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಯಾವುದೇ ಖಾತೆ ನಿರ್ವಹಿಸಲು ಸಿದ್ಧ: ಶೋಭಾ ಕರಂದ್ಲಾಜೆ (Shobha karandlaje | BJP | Yeddyurappa | Congress | JDS)
Bookmark and Share Feedback Print
 
ಸಂಪುಟ ವಿಸ್ತರಣೆ ಸಂದರ್ಭ ವರಿಷ್ಠರು ತಮ್ಮನ್ನು ಪರಿಗಣಿಸಿದರೆ ಸಚಿವೆಯಾಗಿ ಯಾವುದೇ ಖಾತೆ ನಿರ್ವಹಿಸಲು ಸಿದ್ಧ ಎಂದು ಮಾಜಿ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಅವರೊಂದಿಗೆ ಮಾಡಾಳು ಗ್ರಾಮಕ್ಕೆ ಆಗಮಿಸಿ, ಹರಕೆ ತೀರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಕಳೆದ ಬಾರಿ ವಿಧಾನಸಭೆ ಚುನಾವಣೆ ವೇಳೆ ಇಲ್ಲಿಗೆ ಆಗಮಿಸಿದ್ದ ನಾನು, ಬಿಜೆಪಿ ಅಧಿಕಾರಕ್ಕೆ ಬಂದರೆ ದೇವಿಗೆ ದುಗ್ಗಳ ಸೇವೆ ಮಾಡುವುದಾಗಿ ಹರಕೆ ಹೊತ್ತಿದ್ದೆ. ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿದರೂ ಕಾರಣಾಂತರದಿಂದ ದೇವಿಗೆ ಹರಕೆ ಸಲ್ಲಿಸಲು ಆಗಿರಲಿಲ್ಲ. ಆದ್ದರಿಂದ ಈಗ ಬಂದು ಸೇವೆ ಸಲ್ಲಿಸಿದ್ದೇನೆ. ಬಿಜೆಪಿ ಸರಕಾರ ಎಲ್ಲ ಕಂಟಕಗಳಿಂದ ಪಾರಾಗಲಿ ಎಂದು ದೇವಿಯನ್ನು ಬೇಡಿಕೊಂಡಿದ್ದೇನೆ ಎಂದರು.

ಸರಕಾರ ಉತ್ತಮ ಕೆಲಸ ಮಾಡುತ್ತಿರುವುದರಿಂದ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಂಬಂಧಿತ ಮಾಹಿತಿ ಹುಡುಕಿ