ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸರಕಾರ ಉಳಿಯಲ್ಲ, ಉರುಳುತ್ತೆ: ಸಿದ್ದರಾಮಯ್ಯ ಭವಿಷ್ಯ (BJP | Siddaramaiah | Yeddyurappa | Congress | KPCC)
Bookmark and Share Feedback Print
 
NRB
ಅತೃಪ್ತ ಶಾಸಕರು, ಭಿನ್ನರ ಬಂಡಾಯದ ಬಿಸಿಯಿಂದ ಬೇಯುತ್ತಿರುವ ಬಿಜೆಪಿ ಸರಕಾರ ಯಾವುದೇ ಕಾರಣಕ್ಕೂ ಉಳಿಯುವುದಿಲ್ಲ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ.

ಈ ಸರಕಾರ ಉಳಿಯುವ ಯಾವ ಸಾಧ್ಯತೆಯೂ ಇಲ್ಲ, ಬಿಜೆಪಿಯಲ್ಲಿ ಅತೃಪ್ತರು ಸಾಕಷ್ಟಿದ್ದಾರೆ. ಅವರಿಗೆ ಭಯ ಹುಟ್ಟಿಸಲು ಬಿಜೆಪಿಯವರೇ ಕೆಲವು ಸುಳ್ಳು ಸುದ್ದಿಗಳನ್ನು ಹುಟ್ಟು ಹಾಕುತ್ತಿದ್ದಾರೆ ಎಂದು ತಿಳಿಸಿದರು.

ಶಾಸಕ ಸ್ಥಾನ ಅನರ್ಹತೆ, ನೋಟಿಸ್ ನೀಡಿದ್ದೇವೆಂದು ಅತೃಪ್ತರು ಹೊರ ಹೋಗದಿರಲೆಂದು ಬೆದರಿಕೆ ಹಾಕುತ್ತಿದ್ದಾರೆಂದು ಸಿದ್ದರಾಮಯ್ಯ ಹೇಳಿದರು. ಸರಕಾರ ಉರುಳಿಸುವ ಪ್ರಯತ್ನವನ್ನು ಕಾಂಗ್ರೆಸ್ ಮಾಡುವುದಿಲ್ಲ. ಇದು ನಮ್ಮ ಸ್ಪಷ್ಟ ನಿಲುವು. ಆದರೆ ಸರಕಾರ ತಾನಾಗಿಯೇ ಉರುಳುವ ಸಂದರ್ಭದಲ್ಲಿ ಪ್ರತಿಪಕ್ಷದವರಾದ ನಾವು ಉಳಿಸಲಿಕ್ಕಾಗುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ