ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಆಪರೇಷನ್ ಕಮಲಕ್ಕೆ ಬಲಿಯಾಗಲ್ಲ: ಸುನೀಲ್ ಹೆಗಡೆ (Operation Kamala | Sunil hegade | JDS | Kumaraswamy | BJP)
Bookmark and Share Feedback Print
 
ತಾವು ಯಾವುದೇ ಕಾರಣಕ್ಕೂ ಬಿಜೆಪಿಯ 'ಆಪರೇಷನ್ ಕಮಲ'ಕ್ಕೆ ಬಲಿಯಾಗುವುದಿಲ್ಲ ಎಂದು ಜೆಡಿಎಸ್ ಶಾಸಕ ಸುನೀಲ್ ಹೆಗಡೆ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನ ರೆಸಾರ್ಟ್ ರಾಜಕಾರಣಕ್ಕೆ ಅಲ್ಪ ಕಾಲದ ವಿರಾಮ ಹೇಳಿ ನಗರಕ್ಕೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಒಡ್ಡುವ ಆಮಿಷಕ್ಕೆ ಬಲಿಯಾಗಿ ಕ್ಷೇತ್ರದ ಜನತೆಗೆ ಎಂದೂ ಮೋಸ ಮಾಡುವುದಿಲ್ಲ ಎಂದು ಹೇಳಿದರು.

ತುಮಕೂರು ಶಾಸಕ ಸುರೇಶ ಗೌಡ ಹಾಗೂ ಸಚಿವ ಬಸವರಾಜ ಬೊಮ್ಮಾಯಿ ಅವರ ಆಪ್ತರು ತಮಗೆ ಗುರುವಾರ ರಾತ್ರಿಯವರೆಗೂ ಸಂಪರ್ಕಿಸಿ ಆಮಿಷ ಒಡ್ಡಿದ್ದಾರೆ. ಕಾಂಗ್ರೆಸ್ ವಿರುದ್ಧ ತಮ್ಮನ್ನು ಗೆಲ್ಲಿಸಿದ ಹಳಿಯಾಳ ಕ್ಷೇತ್ರದ ಮತದಾರರಿಗೆ ನಂಬಿಕೆ ದ್ರೋಹ ಮಾಡುವುದಿಲ್ಲ ಎಂದರು.

ಬಿಜೆಪಿ ಸರಕಾರಕ್ಕೆ ಬೆಂಗಾವಲಾಗಿರುವ ಆರ್ಎಸ್ಎಸ್‌ಗೆ ನಿಜವಾಗಿಯೂ ದೇಶದ ಸಂವಿಧಾನದ ಮೇಲೆ ಗೌರವವಿದ್ದರೆ ಯಡಿಯೂರಪ್ಪನವರನ್ನು ಬದಲಿಸಿ ಹೊಸ ನಾಯಕತ್ವದಲ್ಲಿ ಸರಕಾರ ರಚನೆ ಮಾಡಲು ಆದೇಶ ನೀಡಲಿ, ಇಲ್ಲವೇ ಮತ್ತೆ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಲಿ ಎಂದು ಸವಾಲೆಸೆದರು.

ತಾವು ಸತ್ಯವಂತರು, ಶುದ್ಧರು ಎಂದು ಹೇಳಿ ಅಧಿಕಾರಕ್ಕೆ ಬಂದ ಬಿಜೆಪಿಯವರು ದೇಶ ಕಂಡರಿಯದ ರಾಜಕೀಯ ವ್ಯಭಿಚಾರ ಆರಂಭಿಸಿದ್ದಾರೆ ಎಂದು ಕಿಡಿಕಾರಿದ ಹೆಗಡೆ, ಸದ್ಯ ಅವಸಾನದ ಅಂಚಿಗೆ ಬಂದು ನಿಂತಿರುವ ರಾಜ್ಯ ಸರಕಾರ ಪತನಕ್ಕಾಗಿ ಅಂತಿಮ ಕ್ಷಣಗಳನ್ನು ಎಣಿಸುತ್ತಿದೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ