ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸ್ಪೀಕರ್ ಕಚೇರಿ ಮೊದ್ಲು ಕಲುಷಿತ ಮಾಡಿದ್ದೇ ಅಪ್ಪ-ಮಕ್ಕಳು: ಗೌಡ (JDS | BJP | Kumaraswamy | Bachhe gowda | Deve gowda | Yeddyurappa)
Bookmark and Share Feedback Print
 
NRB
'ಸ್ಪೀಕರ್ ಕಚೇರಿಯನ್ನು ಮೊದಲು ಕಲುಷಿತಗೊಳಿಸಿದವರು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮತ್ತು ಮಕ್ಕಳು' ಎಂದು ಕಾರ್ಮಿಕ ಸಚಿವ ಬಿ.ಎನ್.ಬಚ್ಚೇಗೌಡ ತಿರುಗೇಟು ನೀಡಿದ್ದಾರೆ.

ಈ ಹಿಂದೆ ಸ್ಪೀಕರ್ ಕುರ್ಚಿಯನ್ನು ಅಲಂಕರಿಸಿದ್ದ ಅಕ್ಕಿಪೇಟೆ ಕೃಷ್ಣ ಅವರನ್ನು ದುರ್ಬಳಕೆ ಮಾಡಿಕೊಂಡೇ ದೇವೇಗೌಡರ ಪುತ್ರ ಕುಮಾರಸ್ವಾಮಿ ಮುಖ್ಯಮಂತ್ರಿಯಾ ದರು. ಇಲ್ಲದಿದ್ದರೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲು ಸಾಧ್ಯವೇ ಆಗುತ್ತಿರಲಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡ ಕುಟುಂಬದವರು ಮಾಡಿರುವ ಕೊಳಕನ್ನು ಮೊದಲು ತೊಳೆಯಬೇಕಾಗಿದೆ. ಇವರ ಪೂರ್ವಾಶ್ರಮ ಏನು ಎನ್ನುವುದು ನಮಗೂ ಗೊತ್ತಿದೆ ಎಂದರು. ಸಿಎಂ ಮತ್ತು ಸ್ಪೀಕರ್ ಕುರ್ಚಿಯನ್ನು ಅರಬ್‌ನ ಸುಗಂಧ ದ್ರವ್ಯದಿಂದ ಶುದ್ಧಗೊಳಿಸಬೇಕು ಎಂದು ದೇವೇಗೌಡರು ಆರೋಪಿಸಿದ್ದಾರೆ. ಮೊದಲು ಅಪ್ಪ-ಮಕ್ಕಳು ಮಾಡಿರುವ ಅಶುದ್ಧವನ್ನು ಶುದ್ಧಗೊಳಿಸಬೇಕಾಗಿದೆ ಎಂದರು.

ಅಲ್ಲದೆ, ಶಾಸಕರಿಗೆ ಆಮಿಷ ಒಡ್ಡುವುದಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ಬಿಡುಗಡೆ ಮಾಡಿರುವ ಸಿ.ಡಿ ಬೋಗಸ್‌ನಿಂದ ಕೂಡಿದೆ ಎಂದು ಬಚ್ಚೇಗೌಡ ಈ ಸಂದರ್ಭದಲ್ಲಿ ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ