ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸಿ.ಟಿ.ರವಿ ದುರಹಂಕಾರಿ: ಕುಮಾರಸ್ವಾಮಿ ವಾಗ್ದಾಳಿ (Kumaraswamy | BJP | JDS | Yeddyurappa | Deve gowda)
Bookmark and Share Feedback Print
 
ರಾಜ್ಯ ರಾಜಕಾರಣದಲ್ಲಿ ರಾಜಕೀಯ ಮುಖಂಡರ ಕೆಸರೆರಚಾಟ ಮುಂದುವರಿದ್ದು, 'ದುರಹಂಕಾರಿಗೆ ಕಾಲವೇ ಉತ್ತರ ನೀಡಲಿದೆ' ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ನಗರದ ಚೆಕ್ ಫೋರ್ಟ್ ವಿಮಾನ ನಿಲ್ದಾಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಸಿ.ಟಿ.ರವಿ ಅವರ ಹೆಸರನ್ನು ನೇರವಾಗಿ ಪ್ರಸ್ತಾಪಿಸದೆ ತೀವ್ರ ವಾಗ್ದಾಳಿ ನಡೆಸಿದರು.

ಇಲ್ಲಿನ ಜನರು ಸುಸಂಸ್ಕೃತರು, ಶಾಂತಿ ಪ್ರಿಯರು, ಮೃದು ಸ್ವಭಾವದವರು. ಇಲ್ಲಿನ ಜನಪ್ರತಿನಿಧಿ, ನಮ್ಮ ಕುಟುಂಬದ ವಿರುದ್ಧ ಅನಾವಶ್ಯಕವಾಗಿ ಟೀಕೆ ಮಾಡುತ್ತಿದ್ದಾರೆ.

ಅವರು ನಮ್ಮಿಂದ ಎಷ್ಟೊಂದು ಸಹಾಯ ಪಡೆದುಕೊಂಡಿದ್ದೇನೆಂದು ನೆನಪು ಮಾಡಿಕೊಂಡರೆ ಸಾಕು ಎಂದರು. ವ್ಯಕ್ತಿಗತ ಟೀಕೆಗಿಂತ ಬೇರೆ ರೀತಿಯಲ್ಲಿ ಚರ್ಚೆ ಮಾಡಿದರೆ ಸ್ವಾಗತಿಸುತ್ತೇನೆ. ಇಲ್ಲಿ ಎಷ್ಟು ಅವ್ಯವಹಾರ ನಡೆದಿದೆ ಎಂಬುದು ಗಮನಕ್ಕೆ ಬಂದಿದೆ ಎಂದು ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ