ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಿಜೆಪಿಗೆ ಯಾವ ಇತಿಹಾಸ, ಪರಂಪರೆ ಇದೆ: ಪರಮೇಶ್ವರ್ (BJP | Yeddyurappa | KPCC | Parameshwar | Siddaramaiah)
Bookmark and Share Feedback Print
 
ನಿದ್ದೆ ಗುಳಿಗೆ ನುಂಗಿ ಮಲಗಿರುವ ಕಾಂಗ್ರೆಸ್ಸಿಗರೇ ಎದ್ದೇಳಿ, ಹಾಳಾಗುತ್ತಿರುವ ವ್ಯವಸ್ಥೆಯನ್ನು ಸರಿದಾರಿಗೆ ತನ್ನಿ ಎಂದು ನೂತನ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಭಾನುವಾರ ಕರೆ ನೀಡಿದ್ದಾರೆ.

'ಮುಖ್ಯಮಂತ್ರಿ ಯಡಿಯೂರಪ್ಪ ಹಾಳಾಗಿ ಹೋಗಲಿ. ಆದರೆ, ವ್ಯವಸ್ಥೆ ಹಾಳಾಗಲು, ದೇಶ ಹಾಳಾಗಲು ಬಿಡಬೇಡಿ ಕಾಂಗ್ರೆಸ್‌ನ ಸಾಧನೆಯ ಪರಂಪರೆ ಹಿಡಿದು ಮನೆ, ಮನೆಗೆ ಹೋಗಿ ಎಂದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಮಾಜಿ ಪ್ರಧಾನಿ ದಿ.ಇಂದಿರಾಗಾಂಧಿ ಅವರ 26ನೇ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಜೆಪಿಗೆ ಯಾವ ಪರಂಪರೆ ಇತಿಹಾಸ ಇದೆ. ಇಟ್ಟಿಗೆ ಕೊಂಡೊಯ್ದದ್ದೇ ಅವರ ಇತಿಹಾಸವಲ್ಲವೇ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್ಸಿಗಿರುವ ಆದರ್ಶ, ಇತಿಹಾಸ ದೇಶ ಇರಲಿ, ಜಗತ್ತಿನ ಯಾವ ಪಕ್ಷಕ್ಕೆ ಇದೆ. ಇಂತಹ ಪರಂಪರೆಯನ್ನು ಜನತೆಗೆ ಮುಟ್ಟಿಸುವ ಬದಲು ನಾವೇಕೆ ನಿದ್ದೆ ಗುಳಿಗೆ ನುಂಗಿ ಮಲಗಬೇಕು ಎಂದು ಪ್ರಶ್ನಿಸಿದರು. ಕಾಂಗ್ರೆಸ್ಸಿಗರು ಕೂಗು ಹಾಕಿದರೆ ಯಡಿಯೂರಪ್ಪ ವಿಧಾನಸೌಧ ಬಿಟ್ಟು ಹೋಗುತ್ತಾರೆ. ಆದರೆ ಕೂಗು ಹಾಕಲು ಕಾಂಗ್ರೆಸ್ಸಿಗರು ಎದ್ದು ನಿಲ್ಲಬೇಕಾಗಿದೆ. ನಮಗೆ ಬಿಜೆಪಿ ಯಾವ ಲೆಕ್ಕ ಎಂದರು.

ನಮಗೆ ಕಾಂಗ್ರೆಸ್ ಪಕ್ಷದ ನ್ಯಾಯ, ತ್ಯಾಗ, ಬಲಿದಾನ ಆದರ್ಶವಾಗಬೇಕು ಎಂದ ಅವರು ಇಂದಿರಾ ನಮಗೆ ಇತಿಹಾಸವಲ್ಲ, ಸಾಧನೆಯ ಪ್ರತೀಕ ಅದನ್ನೇ ಅದನ್ನೇ ಜನರ ಬಳಿ ಬಿಂಬಿಸಬೇಕು ಎಂದರು ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ