ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ರೆಡ್ಡಿ ಬ್ರದರ್ಸ್ ಇಂಟರ್‌ನ್ಯಾಷನಲ್ ಲೀಡರ್ಸಾ?:ಈಶ್ವರಪ್ಪ (Janardana Reddy | Ishwarappa | BJP | Yeddyurappa | Congress)
Bookmark and Share Feedback Print
 
ಬಿಜೆಪಿ ಕಾರ್ಯಕಾರಿಣಿ ಸಭೆಗೆ ಗೈರು ಹಾಜರಾಗಿದ್ದಾರೆಂಬ ಪ್ರಶ್ನೆಯನ್ನೇ ದೊಡ್ಡದಾಗಿ ಕೇಳುತ್ತೀರಲ್ಲ ? ಸಚಿವ ರೆಡ್ಡಿ ಬ್ರದರ್ಸ್ ಬಗ್ಗೆ ಏಕೆ ಇಷ್ಟು ಮಹತ್ವ ಕೊಡ್ತೀರಿ ?ಅವರೇನು ಇಂಟರ್‌ನ್ಯಾಷನಲ್ ಲೀಡರ್ಸಾ ಎಂದು ಪತ್ರಕರ್ತರ ಪ್ರಶ್ನೆಗೆ ಗರಂ ಆಗಿ ಉತ್ತರಿಸಿದವರು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ.

ಗುರುವಾರ ನಗರದಲ್ಲಿ ಕಟ್ಟಡ ಶಂಕುಸ್ಥಾಪನೆ ಸಮಾರಂಭದ ನಂತರ ಸುದ್ದಿಗಾರರು ಅವರನ್ನು ಬಿಜೆಪಿ ಕಾರ್ಯಕಾರಿಣಿ ಸಭೆಗೆ ರೆಡ್ಡಿ ಸಹೋದರರು ಗೈರು ಹಾಜರಾದ ಬಗ್ಗೆ ಅಸಮಾಧಾನದಿಂದಲೇ ಈ ರೀತಿ ಪ್ರತಿಕ್ರಿಯೆ ನೀಡಿದರು.

ಮಾಧ್ಯಮಗಳು ರೆಡ್ಡಿ ಸಹೋದರರ ಬಗ್ಗೆ ಏಕೆ ಇಷ್ಟು ಮಹತ್ವ ಕೊಡುತ್ತವೆಯೋ ನನಗಂತೂ ಅರ್ಥವಾಗುತ್ತಿಲ್ಲ ಎಂದರು. ರೆಡ್ಡಿ ಸಹೋದರರು ಬರಲಿಲ್ಲ, ಏನಾಯಿತು. ಬಂದವರ ಬಗ್ಗೆ ಕೇಳಿ. ಬರದೇ ಇದ್ದವರ ಬಗ್ಗೆ ಯಾಕೆ ಪ್ರಶ್ನೆ ಮಾಡುತ್ತೀರಿ? ಇಷ್ಟಕ್ಕೂ ರೆಡ್ಡಿ ಸಹೋದರರೇನು ಇಂಟರ್‌ನ್ಯಾಷನಲ್ ಲೀಡರ್‌ಗಳೇ? ಯಾಕೆ ಅವರ ಬಗ್ಗೆ ಕಾಳಜಿ ಎಂದು ತರಾಟೆಗೆ ತೆಗೆದುಕೊಂಡರು.

ದೆಹಲಿಯಲ್ಲಿ ಬುಧವಾರ ಕಾಂಗ್ರೆಸ್ ನಾಯಕರಾದ, ಕೇಂದ್ರ ಸಚಿವರೂ ಆದ ವೀರಪ್ಪ ಮೊಯ್ಲಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರುಗಳು ಅತೃಪ್ತ ಬಿಜೆಪಿ ಶಾಸಕರನ್ನು ಭೇಟಿ ಮಾಡಿರುವ ಉದ್ದೇಶ ಏನು ಎಂದು ಪ್ರಶ್ನಿಸಿದರು. ಯಾವುದೇ ಕಾರಣಕ್ಕೂ ಸರಕಾರವನ್ನು ಅಭದ್ರಗೊಳಿಸುವುದಿಲ್ಲ ಎಂದು ಹೇಳುತ್ತಿದ್ದ ಕಾಂಗ್ರೆಸ್ ನಾಯಕರು ಈಗ ಬಹಿರಂಗವಾಗಿ ನಮ್ಮ ಶಾಸಕರನ್ನು ಭೇಟಿ ಮಾಡುವ ದುಸ್ಥಿತಿ ಅವರಿಗೆ ಏಕೆ ಬಂತು ಎಂಬುದು ನನಗಂತೂ ಗೊತ್ತಿಲ್ಲ ಎಂದರು.

ಆದರೆ, ಕಾಂಗ್ರೆಸ್ ಮುಖಂಡರು ವಾಮಮಾರ್ಗದ ಮೂಲಕ ಸರ್ಕಾರವನ್ನು ಉರುಳಿಸಲು ಪ್ರಯತ್ನ ಮಾಡುತ್ತಿದ್ದಾರೆ. ಮುಂದೆಯೂ ಕೂಡ ಸ್ಕೆಚ್ ಹಾಕಿದ್ದಾರೆ ಎಂಬುದು ಅವರ ನಡವಳಿಕೆಯಿಂದಲೇ ಬಟ್ಟಬಯಲಾಗಿದೆ. ಇದಕ್ಕಿಂತ ಸಾಕ್ಷಿ, ಆಧಾರ ಏನು ಬೇಕು ಎಂದು ಕಾಂಗ್ರೆಸ್ ನಾಯಕರ ವರ್ತನೆಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ಸಂಬಂಧಿತ ಮಾಹಿತಿ ಹುಡುಕಿ