ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಿದರಿ ವಿರುದ್ಧ ಮಾನನಷ್ಟ ಮೊಕದ್ದಮೆ: ಮಲ್ಲಮ್ಮ ಬಿದರಿ (Shankar Bidari | Police | Mallamma Bidari | Bangalore)
Bookmark and Share Feedback Print
 
ಪೊಲೀಸ್ ಆಯುಕ್ತ ಶಂಕರ್ ಬಿದರಿ ಅವರೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿರುವ ಮಲ್ಲಮ್ಮ ಬಿದರಿ ಅವರು ತಮ್ಮ ಮೇಲೆ ಹೊರಿಸಿರುವ ಆರೋಪಗಳನ್ನು ಶಂಕರ ಬಿದರಿ ಸಾಬೀತುಪಡಿಸಲಿ ಎಂದು ಸವಾಲು ಹಾಕಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾವು ಯಾವುದೇ ಅವ್ಯವಹಾರದಲ್ಲಿ ತೊಡಗಿಲ್ಲ ಹಾಗೂ ಬಿದರಿ ಅವರ ಹೆಸರು ಹೇಳಿಕೊಂಡು ಯಾರ ಬಳಿಯೂ ವ್ಯವಹಾರ ನಡೆಸಿಲ್ಲ. ಇಷ್ಟಾದರೂ ತಮ್ಮ ಮೇಲೆ ಕೇಳಿ ಬಂದಿರುವ ಆರೋಪಗಳ ಬಗ್ಗೆ ವಿಚಾರಣೆ ನಡೆಸದೆ ಪತ್ರಿಕೆಗಳಿಗೆ ನನ್ನ ವಿರುದ್ಧ ಹೇಳಿಕೆ ನೀಡಿರುವುದು ಸರಿಯಲ್ಲ ಎಂದರು.

ನನ್ನ ಮೇಲಿನ ಆರೋಪಗಳನ್ನು ಶಂಕರ್ ಬಿದರಿ ಅವರು ಸಾಬೀತುಪಡಿಸಬೇಕು ಇಲ್ಲದಿದ್ದರೆ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಅವರು ಹೇಳಿದರು. ತಾವು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದಿಂದ ಬಂದಿರುವ ಮಹಿಳೆಯಾಗಿದ್ದು, ಯಾವುದೇ ಅವ್ಯವಹಾರವಿಲ್ಲದೆ ಸಮರ್ಥವಾಗಿ ಗ್ರಾನೈಟ್ ಉದ್ಯಮ ನಡೆಸುತ್ತಿದ್ದೇನೆ. ಶಂಕರ್ ಬಿದರಿ ಅವರು ಲಿಂಗಾಯಿತರು ಆಗಿದ್ದು, ತಾವೇಕೆ ಅವರ ಸಂಬಂಧಿ ಎಂದು ಹೇಳಿಕೊಳ್ಳಬೇಕು ಎಂದು ಪ್ರಶ್ನಿಸಿದರು.

ನಾವು ಮೂಲತಃ ಬಾಗಲಕೋಟೆಯ ಜಮಖಂಡಿ ತಾಲೂಕಿನವರಾಗಿದ್ದು, ನನ್ನ ತಂದೆಯ ಹೆಸರು ಬಸಪ್ಪ ಬಿದರಿ, ಬಹುಶ ಮನೆತನದ ಹೆಸರಿನಿಂದಾಗಿ ಇಷ್ಟೆಲ್ಲ ಗೊಂದಲಗಳು ಏರ್ಪಟ್ಟಿರಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಸಂಬಂಧಿತ ಮಾಹಿತಿ ಹುಡುಕಿ