ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಯಡಿಯೂರಪ್ಪ ಹಗರಣ ಪೂರ್ಣ ಬಯಲಿಗೆ; ರೇವಣ್ಣ ಸವಾಲ್ (Revanna | JDS | BJP | Yeddyurappa | Deve gowda | Kumaraswamy)
Bookmark and Share Feedback Print
 
ಮಾಜಿ ಪ್ರಧಾನಿ ದೇವೇಗೌಡರ ತುಂಡುಗುತ್ತಿಗೆ ವಿಚಾರವನ್ನು ಬಯಲಿಗೆಳೆಯುವ ಮಾತನಾಡುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ ನೀರಾವರಿ ಇಲಾಖೆಯಲ್ಲಿ ಅಕ್ರಮ ನಡೆಸಿರುವುದನ್ನು ಗುರುವಾರದ ನಂತರ ಎಳೆಎಳೆಯಾಗಿ ಬಿಚ್ಚಿಡಲಾಗುವುದು ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ರೇವಣ್ಣ ಹೊಸ ಬಾಂಬ್ ಸಿಡಿಸಿದ್ದಾರೆ.

ತಾಲೂಕಿನ ಉದಯಪುರ ಗ್ರಾಮದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಯಡಿಯೂರಪ್ಪ ಅವರಿಗೆ ಯಾವುದೇ ತನಿಖೆ ಎದುರಿಸಿ ಅಭ್ಯಾಸ ಇಲ್ಲ. ಸುಳ್ಳು ಹೇಳಿ ಎಷ್ಟು ದಿನ ಕಾಲ ಕಳೆಯುತ್ತಾರೆ ಎಂದು ಪ್ರಶ್ನಿಸಿದರು.

ನಾನು ವಸತಿ ಸಚಿವನಾಗಿದ್ದ ದಿನದಿಂದ ತನಿಖೆ ನಡೆಸಲಿ. ಯಡಿಯೂರಪ್ಪನವರ ಗೊಡ್ಡು ಬೆದರಿಕೆಗಳಿಗೆ ಹೆದರಿ ಮನೆ ಸೇರುವುದಿಲ್ಲ. ಇವರೇ ಅತ್ತೂ ಕರೆದೂ ವಾಪಸ್ ಕರೆತಂದ ಲೋಕಾಯುಕ್ತರ ಬಗ್ಗೆ ಇವರಿಗೇ ನಂಬಿಕೆ ಇಲ್ಲದಿರುವುದು ಅವರ ಅಕ್ರಮವನ್ನು ಸಾಬೀತು ಮಾಡಿದೆ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪನವರೇ ಹೇಳಿರುವಂತೆ ತಪ್ಪು ಮಾಡಿದವರ ಕೈಕತ್ತರಿಸಲಿ ಎಂದು ಸವಾಲು ಹಾಕಿದ ರೇವಣ್ಣ, ದಿನಬೆಳಗಾದರೆ ಹಗರಣಗಳ ಸರಮಾಲೆ ಅವರನ್ನು ಸುತ್ತಿಕೊಳ್ಳುತ್ತಿದ್ದು ದೇವರೇ ಶಿಕ್ಷೆ ಕೊಡುವ ದಿನ ಬರುತ್ತದೆ. ಸೂರ್ಯಗ್ರಹಣದ ನಂತರ ಈ ಸರಕಾರ ಉರುಳುತ್ತದೆ ಎಂದು ಭವಿಷ್ಯ ನುಡಿದರು.
ಸಂಬಂಧಿತ ಮಾಹಿತಿ ಹುಡುಕಿ