ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ನಿತ್ಯಾನಂದನಿಂದ ಜೀವ ಬೆದರಿಕೆ ಇದೆ: ಲೆನಿನ್ ಕುರುಪ್ಪನ್ (Nithyananda | Lenin | FIR | Bidadi | Police | Ranjitha)
Bookmark and Share Feedback Print
 
PTI
ಬಿಡದಿ ಧ್ಯಾನಪೀಠದ ನಿತ್ಯಾನಂದ ಸ್ವಾಮಿಯಿಂದ ಸತತವಾಗಿ ನನಗೆ ಜೀವ ಬೆದರಿಕೆ ಇದೆ. ಹಾಗಾಗಿ ತನಗೆ ಪೊಲೀಸ್ ರಕ್ಷಣೆಯ ಅಗತ್ಯವಿದೆ ಎಂದು ನಿತ್ಯಾನಂದರ ಮಾಜಿ ಕಾರು ಚಾಲಕ ಲೆನಿನ್ ಕುರುಪ್ಪನ್ ತಿಳಿಸಿದ್ದಾನೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ತನ್ನ ವಿರುದ್ಧ ನೀಡಿರುವ ದೂರನ್ನು ವಾಪಸ್ ಪಡೆದುಕೊಳ್ಳುವಂತೆ ನಿತ್ಯಾನಂದ ಪದೇ, ಪದೇ ಒತ್ತಡ ಹೇರುತ್ತಿದ್ದಾನೆ. ಅಷ್ಟೇ ಅಲ್ಲ ಜೀವ ಬೆದರಿಕೆ ಹಾಕುತ್ತಿರುವುದಾಗಿಯೂ ಆರೋಪಿಸಿದ್ದಾರೆ.

ಕಾಮಿ ನಿತ್ಯಾನಂದ ಸ್ವಾಮಿ ಮತ್ತು ನಟಿ ರಂಜಿತಾಳ ರಾಸಲೀಲೆ ಸಿಡಿಯನ್ನು ನಿತ್ಯಾನಂದನ ಮಾಜಿ ಕಾರು ಚಾಲಕರಾಗಿದ್ದ ಲೆನಿನ್ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದರು.

ಸುದ್ದಿಗೋಷ್ಠಿಯಲ್ಲೇ ಮಾತಿನ ಚಕಮಕಿ: ಲೆನಿನ್ ಕರುಪ್ಪನ್ ಸುದ್ದಿಗೋಷ್ಠಿ ನಡೆಸುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಸುಮಾರು 12 ಮಂದಿ ನಿತ್ಯಾನಂದನ ಭಕ್ತರು ಒಳನುಗ್ಗಿ ಲೆನಿನ್ ಮೇಲೆ ಹರಿಹಾಯ್ದಿದ್ದರು. ಲೆನಿನ್ ಸುಳ್ಳು ಹೇಳುತ್ತಿದ್ದಾನೆ, ನಿತ್ಯಾನಂದ ಮೇಲೆ ಸುಳ್ಳು ಆರೋಪ ಹೊರಿಸುತ್ತಿದ್ದಾನೆ ಎಂದು ವಾದಿಸಿದರು.

ಈ ಸಂದರ್ಭದಲ್ಲಿ ನಿತ್ಯಾನಂದ ಭಕ್ತರು ಮತ್ತು ಲೆನಿನ್ ಬೆಂಬಲಿಗರ ನಡುವೆ ತಳ್ಳಾಟ, ನೂಕಾಟ ನಡೆಯಿತು. ಆಗ ಮಧ್ಯಪ್ರವೇಶಿಸಿದ ಪೊಲೀಸರು ಎರಡು ಗುಂಪುಗಳನ್ನು ದೂರ ಮಾಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ನಂತರ ಪೊಲೀಸ್ ಭದ್ರತೆಯಲ್ಲಿ ಲೆನಿನ್ ತೆರಳಿದರು.
ಸಂಬಂಧಿತ ಮಾಹಿತಿ ಹುಡುಕಿ