ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » 'ಕಾಂಗ್ರೆಸ್,ಜೆಡಿಎಸ್‌ಗೆ ಸದಾ ಸರಕಾರ ಉರುಳಿಸೋ ಚಿಂತೆ' (Congress | JDS | Ishwarappa | Yeddyurappa | Kumaraswamy)
Bookmark and Share Feedback Print
 
ರಾಜ್ಯದ ಅಭಿವೃದ್ಧಿ ಬಗ್ಗೆ ಗಮನ ಕೊಡದೆ, ಸದಾಕಾಲ ಸರಕಾರ ಬೀಳಿಸಲು ಕನಸು ಕಾಣುತ್ತಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ವಿರೋಧ ಪಕ್ಷದಲ್ಲಿರಲೂ ಅರ್ಹವಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.

ವಿಪಕ್ಷಗಳ ವರ್ತನೆ ಹೀಗೆ ಮುಂದುವರಿದರೆ ಮುಂದೆ ಜೀವಮಾನವಿಡೀ ಪ್ರತಿಪಕ್ಷಗಳ ಸಾಲಿನಲ್ಲೇ ಕುಳಿತುಕೊಳ್ಳುವ ಪ್ರಮೇಯ ಬರುತ್ತದೆ ಎಂದು ಗುಡುಗಿದ್ದಾರೆ.

ಜಿಲ್ಲಾ ಪಂಚಾಯ್ತಿ ಮತ್ತು ತಾಲೂಕು ಪಂಚಾಯ್ತಿ ಚುನಾವಣೆ ಹಿನ್ನೆಲೆಯಲ್ಲಿ ಶನಿವಾರ ನಗರದ ಶಿವಾನುಭವ ಚರಂತಿಮಠದಲ್ಲಿ ನಡೆದ ಬಿಜೆಪಿ ವಿಭಾಗೀಯ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಅಧಿಕಾರದಿಂದ ದೂರುವುಳಿದಿರುವ, ಜನರಿಂದ ತಿರಸ್ಕಾರಗೊಂಡಿರುವ ಪಕ್ಷಗಳು ತಮಗೆ ಅಡ್ರಸ್ ಇಲ್ಲದಂತಾಗುತ್ತದೆ ಎಂಬ ಭೀತಿಯಿಂದ ಬಿಜೆಪಿ ಸರಕಾರವನ್ನು ಕೆಡವಲು ಯತ್ನಿಸುತ್ತಿವೆ. ಇದು ನನಸಾಗದ ಮಾತು. ಹಾವು-ಮುಂಗುಸಿಯಂತಿದ್ದವರು ಸರಕಾರ ಬೀಳಿಸೋ ವಿಷಯದಲ್ಲಿ ಮಿತ್ರರಾಗಿದ್ದಾರೆ ಎಂದು ವ್ಯಂಗ್ಯವಾಡಿದರು.
ಸಂಬಂಧಿತ ಮಾಹಿತಿ ಹುಡುಕಿ