ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಪ್ರತಿಪಕ್ಷಗಳ 'ಬೆದರು ಬೊಂಬೆ' ಗವರ್ನರ್: ಈಶ್ವರಪ್ಪ (Governor Hansraj Bharadwaj | K S Eshwarappa | BJP | Congress | JDS | Karnataka Government)
Bookmark and Share Feedback Print
 
ರಾಜ್ಯಪಾಲರು ಮತ್ತು ಬಿಜೆಪಿ ಸರಕಾರದ ನಡುವಿನ ಸಮರ ಮತ್ತೊಂದು ಹಂತಕ್ಕೆ ತಲುಪಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರು ರಾಜ್ಯಪಾಲರನ್ನು 'ಕಾಂಗ್ರೆಸ್-ಜೆಡಿಎಸ್‌ಗಳ ಬೆದರು ಬೊಂಬೆ' ಎಂದು ಬಣ್ಣಿಸಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಕೇಂದ್ರ ಕಾನೂನು ಸಚಿವರಾಗಿದ್ದಾಗ ಕೋಟ್ಯಂತರ ರೂಪಾಯಿ ಮೊತ್ತದ ಬೋಫೋರ್ಸ್ ಹಗರಣ ಆರೋಪಿ, ಮಾಜಿ ಪ್ರಧಾವಿ ರಾಜೀವ್ ಗಾಂಧಿಯ ಸ್ನೇಹಿತ, ಇಟಲಿಯ ಉದ್ಯಮಿ ಒಟ್ಟಾವಿಯೋ ಕ್ವಟ್ರೋಚಿಯನ್ನು ಭಾರತದಿಂದ ತಪ್ಪಿಸಿಕೊಳ್ಳುವಂತೆ ಪಾರು ಮಾಡಿದ್ದೇ ಹಂಸರಾಜ್ ಭಾರದ್ವಾಜ್ ಎಂದು ಬೆಂಗಳೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ ಅವರು, ಆಗ ಜಾರ್ಖಂಡ್‌ನಲ್ಲಿ ಕೋಟ್ಯಂತರ ರೂಪಾಯಿ ಹಗರಣ ಮಾಡಿದ್ದ ಮಧು ಕೋಡಾ ವಿರುದ್ಧ ಮಾತೆತ್ತದೆ ಮೌನವಾಗಿದ್ದರು ಎಂದು ಹೇಳಿದರು.

ಈಗ ರಾಜ್ಯದಲ್ಲಿ ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್‌ಗಳ ಬೆದರು ಬೊಂಬೆಯಂತೆ ವರ್ತಿಸುತ್ತಾ, ಬಿಜೆಪಿ ಸರಕಾರದ ಮೇಲೆ ಸವಾರಿ ಮಾಡುವ ರಾಜ್ಯಪಾಲರು ಕಾಂಗ್ರೆಸ್ ವರಿಷ್ಠರನನ್ನು ಮೆಚ್ಚಿಸುವುದಕ್ಕಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದ ಈಶ್ವರಪ್ಪ, ರಾಜ್ಯಪಾಲರು ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲಿ ಎಂದು ಸವಾಲೆಸೆದಿದ್ದಾರೆ.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ
ಸಂಬಂಧಿತ ಮಾಹಿತಿ ಹುಡುಕಿ