ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಿಜೆಪಿ ಸರಕಾರ ಇನ್ನು ಆರು ತಿಂಗಳಲ್ಲಿ ಬೀಳಲಿದೆ: ಸಿದ್ದರಾಮಯ್ಯ (Siddaramayya | Bjp | Government)
Bookmark and Share Feedback Print
 
NRB
ಹಗರಣಗಳಲ್ಲಿ ಮುಳುಗೇಳುತ್ತಿರುವ ಬಿಜೆಪಿ ಸರಕಾರ ಇನ್ನು ಆರು ತಿಂಗಳಲ್ಲಿ ಬೀಳಲಿದ್ದು, ವಿಧಾನಸಭೆಯಲ್ಲಿ ಕಾಂಗ್ರೆಸ್ ಬಾವುಟ ಹಾರಿಸಲಿದ್ದೇವೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ.

ತಾಲೂಕಿನ ಹಿನಕಲ್‌ನಲ್ಲಿ ಕಾಂಗ್ರೆಸ್ ಪಕ್ಷದಿಂದ ನಡೆದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿ, ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ವಾಗ್ದಾಳಿ ನಡೆಸಿ, ನನ್ನ 30 ವರ್ಷಗಳ ರಾಜಕೀಯ ಜೀವನದಲ್ಲಿ ಯಡಿಯೂರಪ್ಪನಂಥ ಲಂಚಕೋರ ಮುಖ್ಯಮಂತ್ರಿಯನ್ನು ಕಂಡಿರಲಿಲ್ಲ. ಕುಮಾರಸ್ವಾಮಿ ಕಡಿಮೆ ಏನಲ್ಲ. ಇಬ್ಬರೂ ಕಳ್ಳರೇ ಎಂದು ಜರಿದರು.

ಯಡ್ಡಿಯೂರಪ್ಪ ಮತ್ತು ರೆಡ್ಡಿ ಬ್ರದರ್ಸ್ ಸಾರ್ವಜನಿಕರ ಆಸ್ತಿಯನ್ನೂ ಲೂಟಿ ಮಾಡಿದ್ದಾರೆ. ಮಂತ್ರಿಮಂಡಲದಲ್ಲಿ ರೇಣುಕಾಚಾರ್ಯ, ಕಟ್ಟಾ, ರೆಡ್ಡಿ ಸಹೋದರರಂಥ ಮುತ್ತು ರತ್ನಗಳನ್ನು ಇಟ್ಟುಕೊಂಡು ಸರಕಾರದ ಖಜಾನೆಯನ್ನು ಬರಿದು ಮಾಡಿ ಸರಕಾರವನ್ನು ಸಾಲದಲ್ಲಿ ಮುಳುಗಿಸಿದ್ದಾರೆ. ಬಿಜೆಪಿ ಸರಕಾರ ಗ್ರಾಮ ಪಂಚಾಯಿತಿಗಳಿಗೆ ಒಂದು ರೂ. ಅನ್ನೂ ನೀಡಿಲ್ಲ. ಎಲ್ಲಾ ಕೇಂದ್ರ ಸರಕಾರದ ಹಣ ಎಂದರು.

ರಾಜ್ಯದ ನಾಲ್ಕೈದು ಜಿಲ್ಲೆಗಳಲ್ಲಿ ಮಾತ್ರ ಜೆಡಿಎಸ್ ಪ್ರಭಾವವಿದ್ದು, ಉಳಿದೆಡೆ ಕಾಂಗ್ರೆಸ್‌ಗೆ ಹೆಚ್ಚು ಅವಕಾಶವಿದೆ. ಹಾಗಾಗಿ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್‌ನ್ನು ಸೋಲಿಸಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲು ಶ್ರಮಿಸಲಾಗುವುದು ಎಂದರು.
ಸಂಬಂಧಿತ ಮಾಹಿತಿ ಹುಡುಕಿ