ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಕಾಂಗ್ರೆಸ್ ಗೆದ್ದರೆ ಜನ ಸತ್ತಂತೆ!: ಸದಾನಂದ ಗೌಡ (Sadananda gowda | BJP | Congress | JDS | Yeddyurappa)
Bookmark and Share Feedback Print
 
NRB
ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಜನ, ಮಾಧ್ಯಮ ಸೋತಂತೆ ಎಂದು ಟೀಕಿಸಿದ್ದ ಜನಾರ್ದನ ಪೂಜಾರಿ ಹೇಳಿಕೆಗೆ, ಕಾಂಗ್ರೆಸ್ ಗೆದ್ದರೆ ಜನ ಸತ್ತಂತೆ ಎಂಬುದಾಗಿ ಡಿ.ವಿ.ಸದಾನಂದ ಗೌಡ ತಿರುಗೇಟು ನೀಡಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಬಟ್ಟಲಲ್ಲಿ ಕತ್ತೆ ಸತ್ತು ಬಿದ್ದಿದೆ, ಬಿಜೆಪಿ ಬಟ್ಟಲಲ್ಲಿ ನೊಣ ಬಿದ್ದು ಸತ್ತದ್ದನ್ನು ಕಾಂಗ್ರೆಸಿಗರು ಸುದ್ದಿ ಮಾಡುತ್ತಿದ್ದಾರೆ. ಇದನ್ನು ಜನಾರ್ದನ ಪೂಜಾರಿ ಗಮನಿಸದಂತೆ ವರ್ತಿಸುತ್ತಿದ್ದಾರೆ. ಬಿಜೆಪಿ ಗೆದ್ದರೆ ಜನ, ಮಾಧ್ಯಮ ಸೋತಂತೆ ಎನ್ನುವ ಬದಲು ಕಾಂಗ್ರೆಸ್ ಗೆದ್ದರೆ ಜನ ಸತ್ತಂತೆ ಎಂದು ಪೂಜಾರಿ ತಿದ್ದಿಕೊಳ್ಳುವುದು ಉತ್ತಮ ಎಂದರು.

ಅಲ್ಲದೆ, ಕೇಂದ್ರ ಸರಕಾರ ಸಂವಿಧಾನಬದ್ದ ಕೇಂದ್ರಗಳನ್ನು ಕಾಂಗ್ರೆಸೀಕರಣ ಮಾಡುತ್ತಿದೆ ಎಂದು ಆರೋಪಿಸಿದ ಅವರು, ರಾಜ್ಯಪಾಲರು ಕಾಂಗ್ರೆಸ್ ಚುನಾವಣಾ ಪ್ರಚಾರದ ಏಜೆಂಟ್ ಆಗಿದ್ದಾರೆ ಎಂದು ಆರೋಪಿಸಿದರು.

ಘನತ್ಯಾಜ್ಯ ವಿಲೇವಾರಿಯನ್ನು ಶೇಖರಿಸುವ ಕೆಲಸನ್ನು ಜೆಡಿಎಸ್ ಮಾಡುತ್ತಿದೆ. ಬೇರೆ ಪಕ್ಷಗಳಿಂದ ತಿರಸ್ಕೃತರನ್ನು ಸೇರ್ಪಡೆಗೊಳಿಸಿಕೊಂಡು ಕೊನೆಯ ರಾಜಕೀಯ ದೊಂಬರಾಟ ಆಡುತ್ತಿದೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ