ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸಿಎಂ ಕಾರ್ಯದರ್ಶಿ ಕಾರು ಚಾಲಕ ಲೋಕಾಯುಕ್ತ ಬಲೆಗೆ (BJP | Yeddyurappa | Lokayuktha | Banashankari Temple | Police)
Bookmark and Share Feedback Print
 
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಹಾಗೂ ಮುಜರಾಯಿ ಆಯುಕ್ತ ನಂದಕುಮಾರ್ ಅವರ ಕಾರು ಚಾಲಕ, ಮುಜರಾಯಿ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿಯೊಬ್ಬರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ನಂದಕುಮಾರ್ ಅವರ ಕಾರು ಚಾಲಕ ಸುಂದರ್ ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ಮುನಿಯಪ್ಪ ಆರೋಪಿಗಳು. ಬನಶಂಕರಿ ದೇವಸ್ಥಾನದ ಅರ್ಚಕರಾದ ಆನಂದ್ ಕುಮಾರ್ ಎಂಬುವರಿಂದ 35 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ.

ಆನಂದ್ ಕುಮಾರ್ ವಿರುದ್ಧ ನಿಧಿ ದುರ್ಬಳಕೆ ಆರೋಪವಿತ್ತು. ಈ ಹಿನ್ನೆಲೆಯಲ್ಲಿ ಅವರಿಗೆ ಕರೆ ಮಾಡಿದ ಆರೋಪಿಗಳು ಪ್ರಕರಣ ಮುಚ್ಚಿಹಾಕಲು 3 ಲಕ್ಷ ರೂಪಾಯಿ ಕೊಡುವಂತೆ ಒತ್ತಾಯಿಸಿದ್ದರು. ಈ ಸಂಬಂಧ ಆನಂದ್ ಕುಮಾರ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಅವರಿಗೆ ಕರೆ ಮಾಡಿದ ಆರೋಪಿಗಳು, ಮೊದಲು 35 ಸಾವಿರ ರೂ.ನೀಡುವಂತೆ ಆಗ್ರಹಿಸಿದರು. ಆನಂದ್ ಕುಮಾರ್ ಈ ಮಾಹಿತಿಯನ್ನು ಲೋಕಾಯುಕ್ತರಿಗೆ ತಲುಪಿಸಿದ್ದರು.

ತದನಂತರ ಆನಂದ್ ಕುಮಾರ್ ಆರೋಪಿಗಳಿಗೆ ಹಣ ಕೊಡುತ್ತಿದ್ದಾಗ, ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದರು. ಈ ಸಂದರ್ಭದಲ್ಲಿ
ನಂದಕುಮಾರ್ ಅವರ ಕಾರು ಚಾಲಕ ಸುಂದರ್ ಮತ್ತು ಮುನಿಯಪ್ಪ ಸೆರೆಸಿಕ್ಕಿದ್ದರು.
ಸಂಬಂಧಿತ ಮಾಹಿತಿ ಹುಡುಕಿ