ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » 30 ದಿನದೊಳಗೆ ರಾಜ್ಯದ ಬಿಜೆಪಿ ಸರಕಾರ ಪತನ: ದತ್ತಾ (Dutta | BJP | Election | Yeddyurappa | JDS | Kumaraswamy)
Bookmark and Share Feedback Print
 
ಇನ್ನು ಮೂವತ್ತು ದಿನದೊಳಗೆ ಆಡಳಿತಾರೂಢ ರಾಜ್ಯದ ಬಿಜೆಪಿ ಸರಕಾರ ಬೀಳಲಿದೆ ಎಂದು ಜೆಡಿಎಸ್ ವಕ್ತಾರ ವೈ.ಎಸ್.ವಿ.ದತ್ತಾ ತಿಳಿಸಿದ್ದಾರೆ.

ಯಗಟಿ ಮತಗಟ್ಟೆಯಲ್ಲಿ ಮತದಾನ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಜನ ಪಕ್ಷಪಾತ, ಅಧಿಕಾರ ದುರುಪಯೋಗ, ಹಗರಣಗಳಿಂದಾಗಿ ಯಡಿಯೂರಪ್ಪ ತಲೆ ದಂಡ ಖಚಿತ. ಯಾವ ಶಕ್ತಿಯೂ ಅವರನ್ನು ಅಧಿಕಾರದಲ್ಲಿ ಉಳಿಸಲು ಸಾಧ್ಯವಿಲ್ಲ ಎಂದು ಭವಿಷ್ಯ ನುಡಿದರು.

ಈ ಸರಕಾರದ ಹಗರಣಗಳ ಕುರಿತಂತೆ ಜೆಡಿಎಸ್ ಲೋಕಾಯುಕ್ತರಿಗೆ ನೀಡಿರುವ ದೂರಿನಿಂದಾಗಿ ಬೆದರಿರುವ ಮುಖ್ಯಮಂತ್ರಿ, ಲೋಕಾಯುಕ್ತ ತನಿಖೆ ತಡೆಗೆ ಹೈಕೋರ್ಟ್‌ನಲ್ಲಿ ಮೊಕದ್ದಮೆ ದಾಖಲಿಸಿದ್ದು, ಜ.6 ರಂದು ವಿಚಾರಣೆ ನಡೆಯಲಿದೆ. ಲಾಯರ್ ಫೋರಂ ಕೂಡ ಮುಖ್ಯಮಂತ್ರಿ ವಿರುದ್ಧ ದೋಷಾರೋಪ ಪಟ್ಟಿ ದಾಖಲಿಸಲು ರಾಜ್ಯಪಾಲರ ಅನುಮತಿ ಕೋರಿದೆ. ಇಂತಹ ಸನ್ನಿವೇಶದಲ್ಲಿ ಸೂಕ್ತ ಕ್ರಮ ಜರುಗಿಸುವುದು ರಾಜ್ಯಪಾಲರಿಗೆ ಅನಿವಾರ್ಯವಾಗಲಿದೆ ಎಂದರು.

ಕಳೆದ ಉಪಚುನಾವಣೆಯಲ್ಲಿ ರಾಜ್ಯ ಬಿಜೆಪಿ ಸರಕಾರ ಅನ್ಯಾಯ, ಅಕ್ರಮಗಳನ್ನು ಎಸಗಿದ್ದು ಮತದಾರರ ಉತ್ಸಾಹವನ್ನು ಕುಂದಿಸಿದೆ. ಜನರು ಸ್ವ ಇಚ್ಚೆಯಿಂದ ಮತದಾನ ಮಾಡುವ ದಿನಗಳು ದೂರವಾಗುತ್ತಿದ್ದು, ಈ ಪಾಪದ ಹೊಣೆಯನ್ನು ಬಿಜೆಪಿ ಹೋರಬೇಕಿದೆ ಎಂದು ಆರೋಪಿಸಿದರು.
ಸಂಬಂಧಿತ ಮಾಹಿತಿ ಹುಡುಕಿ