ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಏಳು ವರ್ಷ ಹಿಂದೆ ನಾಪತ್ತೆಯಾದ ಯುವಕ ಕೊನೆಗೂ ಮನೆಗೆ (Kasargodu | Kerala | Police | Palakkad)
Bookmark and Share Feedback Print
 
ಏಳು ವರ್ಷ ಹಿಂದೆ ನಾಪತ್ತೆಯಾಗಿದ್ದ ಯುವಕನೊಬ್ಬ ಮತ್ತೆ ಮನೆ ಸೇರಿರುವ ಘಟನೆ ವರದಿಯಾಗಿದೆ. ತುರ್ತಿ ನಿವಾಸಿ ನಿಶಾಂತ್ (26) ಮನೆಗೆ ಮರಳಿದ ಯುವಕ. ಕೇರಳದಲ್ಲಿ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ಈತನನ್ನು ಗಸ್ತು ನಡೆಸುತ್ತಿದ್ದ ಪೊಲೀಸರು ವಶಕ್ಕೆ ತೆಗೆದುಕೊಂದು ವಿಚಾರಿಸಿದಾಗ ಏಳು ವರ್ಷ ಹಿಂದೆ ಮನೆ ಬಿಟ್ಟು ಬಂದ ವಿಚಾರ ತಿಳಿಸಿದ್ದ.

ಬೇಕರಿ ಕೆಲಸಕ್ಕೆಂದು ಹೇಳಿ ಬೆಂಗಳೂರಿಗೆ ತೆರಳಿದ್ದ ನಿಶಾಂತ್ ಬಳಿಕ ಚೆನ್ನೈ, ತ್ರಿಶ್ಯೂರು, ಕೊಯಮತ್ತೂರು, ತಿರುಪೂರ್ ಮೊದಲಾದೆಡೆ ಬೇಕರಿ, ಚಹಾದಂಗಡಿಗಳಲ್ಲಿ ಕೆಲಸ ನಿರ್ವಹಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಬಳಿಕ ಕೆಲಸ ಹುಡುಕಿಕೊಂಡು ಪಾಲಕ್ಕಾಡ್‌ಗೆ ಬಂದಾಗ ಪೊಲೀಸರ ಅತಿಥಿಯಾಗಿದ್ದ. ಈತ ನೀಡಿದ ಮಾಹಿತಿಯಂತೆ ಸ್ಥಳೀಯ ಪೊಲೀಸರ ಮೂಲಕ ಮನೆಯವರನ್ನು ಸಂಪರ್ಕಿಸಿ ನಗರ ಠಾಣೆಯಲ್ಲಿ ಯುವಕನನ್ನು ಕುಟುಂಬದವರಿಗೆ ಹಸ್ತಾಂತರಿಸಲಾಯಿತು.
ಸಂಬಂಧಿತ ಮಾಹಿತಿ ಹುಡುಕಿ