ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಅಮಾನತು ಮಾಡಿದ್ರೆ,ಎಲ್ಲರೂ ರಾಜೀನಾಮೆ ಕೊಡ್ತೇವೆ: ಸಿದ್ದು (Siddaramaiah | BJP | JDS | Congress | Yeddyurappa)
Bookmark and Share Feedback Print
 
ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ವೇಳೆ ಅಶಿಸ್ತು ತೋರಿದ್ದಾರೆಂಬ ಆರೋಪದಲ್ಲಿ 15 ಮಂದಿ ಶಾಸಕರನ್ನು ಅಮಾನತು ಮಾಡಿದರೆ ವಿರೋಧ ಪಕ್ಷದ ಎಲ್ಲ ಶಾಸಕರು ಸಾಮೂಹಿಕ ರಾಜೀನಾಮೆ ನೀಡಲಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

ಯಾವುದೇ ಶಾಸಕರನ್ನು ಅಶಿಸ್ತು ಎಂದು ಹೇಳಿ ಈ ರೀತಿ ಅಮಾನತು ಮಾಡಲು ಬರುವುದಿಲ್ಲ. ಅಮಾನತಿಗೆ ಮುಂದಾದರೆ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದರು.

ಯಾವ ನಿಯಮದಡಿ ಶಾಸಕರನ್ನು ಅಮಾನತುಗೊಳಿಸಲಾಗುತ್ತದೆ ಎನ್ನುವುದನ್ನು ಸಭಾಧ್ಯಕ್ಷರು ಸ್ಪಷ್ಟಪಡಿಸಬೇಕು. ಆದರೆ ನನಗೆ ತಿಳಿದಿರುವಂತೆ ಅಶಿಸ್ತು ತೋರಿದ ಶಾಸಕರನ್ನು ದಿನದ ಮಟ್ಟಿಗೆ ಅಮಾನತು ಮಾಡುವ ಅವಕಾಶವಿದೆ. ಒಂದು ವರ್ಷ, ಆರು ತಿಂಗಳು ಅಮಾನತು ಮಾಡಲು ಸಾಧ್ಯವಿಲ್ಲ ಎಂದು ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ