ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಚನ್ನಪಟ್ಟಣದಲ್ಲಿ ಗೆದ್ರೆ ಮಂತ್ರಿ ಪದವಿ; ಬಿಜೆಪಿ ಆಫರ್! (BJP | Kumaraswamy | Yeddyurappa | Channapattana | JDS | Election)
ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಕ್ಕೆ ಏಪ್ರಿಲ್ 9ರಂದು ನಡೆಯಲಿರುವ ಚುನಾವಣೆ ಆಡಳಿತಾರೂಢ ಬಿಜೆಪಿ ಹಾಗೂ ಕಾಂಗ್ರೆಸ್, ಜೆಡಿಎಸ್‌ಗೆ ಪ್ರತಿಷ್ಠೆಯ ಕಣವಾಗಿದೆ. ಏತನ್ಮಧ್ಯೆ ಚನ್ನಪಟ್ಟಣ ಕ್ಷೇತ್ರವನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದ್ದು, ಇಲ್ಲಿ ಜೆಡಿಎಸ್ ಸೋಲಿಸಿದವರಿಗೆ ಮಂತ್ರಿ ಪದವಿ ಕೊಡುವ ಆಫರ್ ನೀಡಿದೆಯಂತೆ!

ಚನ್ನಪಟ್ಟಣದಲ್ಲಿ ಜೆಡಿಎಸ್ ಸೋಲಿಸಿ ಗೆಲುವು ಸಾಧಿಸುವ ಅಭ್ಯರ್ಥಿಗೆ ಮಂತ್ರಿ ಪಟ್ಟ ಎಂಬ ಆಫರ್ ಅನ್ನು ಬಿಜೆಪಿ ನೀಡಿದೆ ಎಂದು ವಿಧಾನಸೌಧದ ಪಡಸಾಲೆಯಲ್ಲಿ ಗುಸು,ಗುಸು ಮಾತುಗಳು ಕೇಳಿಬರತೊಡಗಿದೆ. ಹೊಸ ದಾಳ ಉರುಳಿಸಿರುವ ಬಿಜೆಪಿ, ನೀವು ಮಂತ್ರಿಯಾಗಬೇಕಾ, ಹಾಗಿದ್ದರೆ ಚನ್ನಪಟ್ಟಣದಲ್ಲಿ ನಿಂತು ಗೆದ್ದು ಬನ್ನಿ, ಖಂಡಿತ ನಿಮ್ಮನ್ನು ಮಂತ್ರಿ ಮಾಡುತ್ತೇವೆ ಎಂಬ ಮಾತು ಆಡಳಿತ ಪಕ್ಷದ ಸಚಿವರಿಂದ ಕೇಳಿಬರತೊಡಗಿದೆ. ಏತನ್ಮಧ್ಯೆ ಬಿಜೆಪಿ ಚನ್ನಪಟ್ಟಣದಿಂದ ಸಿ.ಪಿ.ಯೋಗೇಶ್ವರ್ ಅವರನ್ನು ಕಣಕ್ಕಿಳಿಸುವುದು ಬಹುತೇಕ ಖಚಿತವಾಗಿದೆ

ಈ ದಾಳ ಉರುಳಿಸಲು ಪ್ರಮುಖ ಕಾರಣ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಂಸತ್ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜ್ಯರಾಜಕಾರಣ ಪ್ರವೇಶಿಸುತ್ತಾರೆಂಬ ಹೇಳಿಕೆ. ಒಂದು ವೇಳೆ ಕುಮಾರಸ್ವಾಮಿ ವಿರುದ್ಧ ನಿಂತು ಗೆದ್ದರೆ ಮಂತ್ರಿ ಪದವಿ ಖಚಿತ ಎಂಬ ಆಮಿಷವೊಡ್ಡಿದೆ. ಅಂತೂ ರಾಜ್ಯರಾಜಕಾರಣ ಮತ್ತಷ್ಟು ಕುತೂಹಲ ಹುಟ್ಟಿಸಿದೆ.
ಇವನ್ನೂ ಓದಿ