ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ನಾನೂ ಟ್ರಸ್ಟ್ ಮಾಡ್ತೇನೆ ಹಣ ಕೊಡಿಸ್ತೀರಾ?: ಸಿದ್ದು ಗುದ್ದು (Siddaramaiah | BJP | Yeddyurappa | Congress | Vidhana sowdha session)
'ಯಾವುದೇ ಟ್ರಸ್ಟ್ ಮಾಡಿದರೂ ಹಣ ಬರುತ್ತದೆ ಎಂದಾದರೆ, ನಾನೂ ಒಂದು ಟ್ರಸ್ಟ್ ಸ್ಥಾಪಿಸುತ್ತೇನೆ. ಹಣ ಕೊಡಿಸಿ ಎಂದು ಹಾಸ್ಯ ಚಟಾಕಿ ಹಾರಿಸಿದವರು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ.

ಮಂಗಳವಾರ ಪ್ರೇಣರಣಾ ಟ್ರಸ್ಟ್‌ಗೆ ಅಕ್ರಮವಾಗಿ ಡೊನೇಷನ್ ಸಂದಾಯವಾದ ಪ್ರಕರಣದ ಕುರಿತು ಸಿಬಿಐ ತನಿಖೆ ನಡೆಸಬೇಕೆಂದು ಪ್ರತಿಪಕ್ಷಗಳ ಸದಸ್ಯರು ಧರಣಿ ನಡೆಸಿದ್ದರು. ಕಲಾಪದಲ್ಲಿ ಕೋಲಾಹಲ ಹೆಚ್ಚಿದ ಪರಿಣಾಮ ಸದನವನ್ನು ಸ್ಪೀಕರ್ ಕೆಜಿ ಬೋಪಯ್ಯ ಅರ್ಧ ಗಂಟೆ ಕಾಲ ಮುಂದೂಡಿದರು.

ನಂತರ ಕಲಾಪ ಆರಂಭವಾದಾಗ ಸದನದಲ್ಲೇ ಹಾಜರಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಉದ್ದೇಶಿಸಿ ಸಿದ್ದರಾಮಯ್ಯ ಈ ರೀತಿ ಕುಟುಕಿದರು.

ನಿಮ್ಮ ಟ್ರಸ್ಟ್‌ಗಳಿಗೆ ಕೋಟ್ಯಂತರ ರೂಪಾಯಿ ಹರಿದು ಬರುತ್ತದೆ. ಅದೇ ರೀತಿ ನಮ್ಮ ಟ್ರಸ್ಟ್‌ಗಳಿಗೆ ಹಣ ಬರುವುದಾದರೆ ನಾವೂ ಒಂದು ಟ್ರಸ್ಟ್ ಸ್ಥಾಪಿಸುತ್ತೇವೆ. ಹಣ ಕೊಡಿಸುತ್ತೀರಾ ಎಂದು ಪ್ರಶ್ನಿಸಿದರು.

ಈ ಪ್ರಶ್ನೆಗೆ ಮುಖ್ಯಮಂತ್ರಿಗಳು ನೇರ ಉತ್ತರ ನೀಡದೆ ಮುಗುಳ್ನಕ್ಕರು. ಆಗ ಕಾಂಗ್ರೆಸ್‌ನ ಎ.ಮಂಜು ಅವರಿಂದ ಮತ್ತೊಂದು ಪ್ರಶ್ನೆ ಎದುರಾಯಿತು. ಈ ಹಗರಣ ಕುರಿತು ಸಿದ್ದರಾಮಯ್ಯ ನೇತೃತ್ವದಲ್ಲಿ ಸದನ ಸಮಿತಿ ಏಕೆ ರಚಿಸಬಾರದು ಎಂದು ಪ್ರಶ್ನಿಸಿದರು. ಅವರ ನೇತೃತ್ವದಲ್ಲಿ ಸದನ ಸಮಿತಿ ಮಾಡಿದರೆ ಅಷ್ಟೇ ಎಂದು ತಿರುಗೇಟು ಮುಖ್ಯಮಂತ್ರಿಗಳು ತಿರುಗೇಟು ನೀಡಿದರು.

ಈ ಹಿಂದೆ ಆರ್.ಎಲ್.ಜಾಲಪ್ಪ ಅವರ ವಿರುದ್ಧ ಆರೋಪ ಬಂದಾಗಲೂ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ನಿಮ್ಮ ವಿರುದ್ಧ ಎಲ್ಲ ದಾಖಲೆ ಇದ್ದರೂ ನೀವು ರಾಜೀನಾಮೆ ನೀಡುತ್ತಿಲ್ಲ ಎಂದು ಸಿದ್ದ ಕುಟುಕಿದರು. ಆಗ ಯಡಿಯೂರಪ್ಪನವರು, ಜಾಲಪ್ಪ ಕೊನೆಗೆ ನಿರ್ದೋಷಿ ಎಂದು ಸಾಬೀತಾಯಿತು ಎಂಬುದನ್ನು ಗಮನದಲ್ಲಿರಲಿ ಎಂದು ನೆನಪಿಸಿದರು.
ಇವನ್ನೂ ಓದಿ