ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಅನಂತ್, ಈಶ್ವರಪ್ಪ, ಶೆಟ್ಟರ್‌ಗೆ ಸಿಎಂ ಆಗುವಾಸೆ: ಸಿದ್ದು (Ananth Kumar | Eshwarappa | Jagadish Shettar | Siddharamiah | BJP Dissidence | Karnataka BJP)
ಬಿಜೆಪಿಯೊಳಗಿರುವ ಅನಂತ್ ಕುಮಾರ್, ಈಶ್ವರಪ್ಪ ಮತ್ತು ಜಗದೀಶ್ ಶೆಟ್ಟರ್ ಮುಂತಾದವರಿಗೆಲ್ಲಾ ಮುಖ್ಯಮಂತ್ರಿ ಆಗುವಾಸೆ. ಅದಕ್ಕಾಗಿಯೇ ಅವರು ಭಿನ್ನಮತ ಮಾಡುತ್ತಾ, ಸರಕಾರವನ್ನು ಅಸ್ಥಿರಗೊಳಿಸುತ್ತಿದ್ದಾರೆಯೇ ಹೊರತು, ಪ್ರತಿಪಕ್ಷದವರ ಕೈವಾಡವೇನೂ ಇದರಲ್ಲಿಲ್ಲ ಎಂದು ಕಾಂಗ್ರೆಸ್ ನಾಯಕ, ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯೊಳಗಿನ ಮುಖಂಡರ ಅಧಿಕಾರದ ಆಸೆಯಿಂದಾಗಿ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪರನ್ನು ಕುರ್ಚಿಯಿಂದ ಕೆಳಗಿಳಿಸಲೇಬೇಕು ಎಂದು ಪಣ ತೊಟ್ಟಿರುವುದರಿಂದ ಬಿಜೆಪಿಯಲ್ಲಿ ಭಿನ್ನಮತ ಏರ್ಪಟ್ಟಿದೆ. ಮುಖ್ಯಮಂತ್ರಿ ಕುರ್ಚಿ ಮೇಲೆ ಕಣ್ಣಿಟ್ಟಿರುವ ಈ ಮುಖಂಡರೇ ಭಿನ್ನಮತಕ್ಕೆ ಕಾರಣರೇ ಹೊರತು, ವಿರೋಧ ಪಕ್ಷಗಳಲ್ಲ ಎಂದು ಹೇಳಿದರು.

ಆಗಾಗ್ಗೆ ಹಾವು ಮುಂಗುಸಿಗಳಂತೆ ಕಚ್ಚಾಡುತ್ತಿರುವ ಈಶ್ವರಪ್ಪ ಮತ್ತು ಯಡಿಯೂರಪ್ಪ, ಇಬ್ಬರೂ ಅಧಿಕಾರಕ್ಕೋಸ್ಕರವಾಗಿ ಈಗ ಗೋಸುಂಬೆಗಳಂತೆ ಬಣ್ಣ ಬದಲಾಯಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಟೀಕಿಸಿದರು. ರಂಭಾಪುರಿ ಮಠ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಈಶ್ವರಪ್ಪ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪರಸ್ಪರರನ್ನು ಹೊಗಳಿಕೊಂಡಿರುವುದನ್ನು ಉಲ್ಲೇಖಿಸುತ್ತಾ ಅವರು ಈ ವಿಷಯ ಹೇಳಿದರು.
ಇವನ್ನೂ ಓದಿ