ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಮಾಜಿ ಪಿಎಂ ಆಗಿ ರಾಜಕೀಯ ಮಾತಾಡೋ ಮೂರ್ಖನಲ್ಲ: ಗೌಡ (Deve gowda | BJP | JDS | Congress | Siddaramaiah | Karnataka Crisis)
PR
' ಇಂತಹ ಸಂದರ್ಭದಲ್ಲಿ ನಾನೊಬ್ಬ ಮಾಜಿ ಪ್ರಧಾನಿಯಾಗಿ ರಾಜಕೀಯ ಮಾತಾಡೋವಷ್ಟು ಮೂರ್ಖನಲ್ಲ'. ರಾಜ್ಯಪಾಲರಿಗೆ 74ನೇ ಹುಟ್ಟು ಹಬ್ಬದ ಶುಭಾಶಯ ಹೇಳಲು ತಾನು ಆಗಮಿಸಿದ್ದೇನೆ...ಇದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಪ್ರತಿಕ್ರಿಯೆ.

ಮಂಗಳವಾರ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ತರಾತುರಿಯಲ್ಲೇ ರಾಜಭವನಕ್ಕೆ ದೌಡಾಯಿಸಿದ್ದರು. ಸುಮಾರು ಒಂದೂವರೆ ಗಂಟೆಗಳ ಕಾಲ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಜತೆ ದೇವೇಗೌಡರು ಮಾತುಕತೆ ನಡೆಸಿದರು.

ರಾಜ್ಯಪಾಲರ ಭೇಟಿಯ ಅಂತ್ಯದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ನೋಡಿ...ನೀವೇ ಮಾಧ್ಯಮದವರೇ ಬೆಳಿಗ್ಗೆ ನೆನಪಿಸಿದ್ದೀರಿ. ಇಂದು ರಾಜ್ಯಪಾಲರ ಹುಟ್ಟುಹಬ್ಬ ಅಂತ. ಹಾಗಾಗಿ ನಾನು ಅವರನ್ನು ಅಭಿನಂದಿಸಲು ಆಗಮಿಸಿದ್ದೆ. ಆಗ ರಾಜ್ಯಪಾಲರು ಸೆಕ್ರೆಟರಿಯವರ ಜತೆ ಚರ್ಚೆ ಮಾಡುತ್ತಿದ್ದರಿಂದ ಸುಮಾರು ಅರ್ಧ ಗಂಟೆಗಳ ಕಾಲ ಕಾಯಬೇಕಾಯಿತು. ಆ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಕೂಡ ಆಗಮಿಸಿದರು.

ನಾನೀಗ ಸುದ್ದಿಗೋಷ್ಠಿ ಮುಗಿಸಿ ಬಂದಿದ್ದೇನೆ ಅಂತ ಹೇಳಿದೆ, ಅದಕ್ಕೆ ಸಿದ್ದರಾಮಯ್ಯನವರು ಪ್ರತಿಭಟನೆ ನಡೆಸಿ ಬಂಧನಕ್ಕೊಳಗಾಗಿ ಬಿಡುಗಡೆಗೊಂಡು ಬಂದಿದ್ದೇನೆ ಎಂದರು. ನಂತರ ರಾಜ್ಯಪಾಲರಿಗೆ ಶುಭಾಶಯ ಹೇಳಿದೆವು, ಅಷ್ಟು ಬಿಟ್ಟರೆ ಬೇರೇನೂ ಇಲ್ಲ. ಬೇರೆ ಯಾವ ವಿಚಾರದ ಬಗ್ಗೆಯೂ ಚರ್ಚಿಸಿಲ್ಲ ಎಂದು ಗೌಡರು ಹೇಳಿದರು.
ಇವನ್ನೂ ಓದಿ