ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ನನಗೆ ಸೂಪರ್ ಸಿಎಂ ಆಗೋ ಆಸೆ ಇಲ್ಲ: ಯಡಿಯೂರಪ್ಪ (Yeddyurappa | Sadananda Gowda | super CM | Nitin Gadkari | Lokayukta | Report)
ನನಗೆ ಸೂಪರ್ ಸಿಎಂ ಆಗೋ ಆಸೆ ಇಲ್ಲ: ಯಡಿಯೂರಪ್ಪ
ಬೆಂಗಳೂರು, ಮಂಗಳವಾರ, 2 ಆಗಸ್ಟ್ 2011( 20:42 IST )
PR
ಡಿ.ವಿ.ಸದಾನಂದ ಗೌಡರನ್ನು ಮುಖ್ಯಮಂತ್ರಿಗಾದಿ ಮೇಲೆ ಕುಳ್ಳಿರಿಸಿ ಪರೋಕ್ಷವಾಗಿ ರಾಜ್ಯರಾಜಕಾರಣದ ಚುಕ್ಕಾಣಿಯನ್ನು ತನ್ನ ಕೈಯಲ್ಲೇ ಹಿಡಿದಿಟ್ಟುಕೊಳ್ಳುವ ಹುನ್ನಾರ ಎಂಬ ಆರೋಪವನ್ನು ಸಾರಸಗಟಾಗಿ ತಳ್ಳಿಹಾಕಿರುವ ಹಂಗಾಮಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ನನಗೆ ಸೂಪರ್ ಸಿಎಂ ಆಗೋ ಆಸೆ ಇಲ್ಲ ಎಂದು ಮಂಗಳವಾರ ಸ್ಪಷ್ಟಪಡಿಸಿದ್ದಾರೆ.
ನನಗೆ ಸೂಪರ್ ಸಿಎಂ ಆಗೋ ಹಂಬಲ ಇಲ್ಲ ಎಂದು ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದರು. ನೂತನ ಮುಖ್ಯಮಂತ್ರಿ ಯಾರಾಗಬೇಕೆಂಬ ಬಗ್ಗೆ ಯಡಿಯೂರಪ್ಪ (ಡಿವಿ ಸದಾನಂದ ಗೌಡ) ಹಾಗೂ ಅನಂತ್ ಕುಮಾರ್ (ಜಗದೀಶ್ ಶೆಟ್ಟರ್) ಬಣಗಳ ನಡುವೆ ಹಗ್ಗಜಗ್ಗಾಟ ಮುಂದುವರಿದಿದೆ. ಅಲ್ಲದೇ ಬುಧವಾರ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಅಲ್ಲಿ ಬಿಜೆಪಿ ಹೈಕಮಾಂಡ್ ನೂತನ ಮುಖ್ಯಮಂತ್ರಿಯ ಆಯ್ಕೆ ಮಾಡಲಿದೆ.
ಪಕ್ಷದ ವರಿಷ್ಠರ ಆಣತಿ ಮೇರೆಗೆ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ಈಗಾಗಲೇ ರಾಜೀನಾಮೆ ಸಲ್ಲಿಸಿದ್ದೇನೆ. ನಾನು ಪಕ್ಷ ಮತ್ತು ಮುಖಂಡರ ಸಲಹೆಯನ್ನು ಒಪ್ಪುತ್ತೇನೆ. ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ.ಅಡ್ವಾಣಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ನಿತಿನ್ ಗಡ್ಕರಿ ನನಗೆ ಈ ಹಿಂದೆ ಹಾಗೂ ಇನ್ನು ಮುಂದೆಯೂ ಮಾರ್ಗದರ್ಶನ ನೀಡಲಿದ್ದಾರೆ ಎಂದರು.