ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಕರ್ನಾಟಕ ಸುದ್ದಿ » ಹೌದು ನಾನು ದಿನಗೂಲಿ ನೌಕರ: ಎಚ್ಡಿಕೆಗೆ ಡಿವಿ ತಿರುಗೇಟು (Kumaraswamy | sadananda gowda | JDS | BJP | Karnataka News | Bangalore News,)
ಹೌದು ನಾನು ದಿನಗೂಲಿ ನೌಕರ: ಎಚ್ಡಿಕೆಗೆ ಡಿವಿ ತಿರುಗೇಟು
ಬೆಂಗಳೂರು, ಸೋಮವಾರ, 12 ಸೆಪ್ಟೆಂಬರ್ 2011( 12:36 IST )
ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ದಿನಗೂಲಿ ನೌಕರ ಎಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯಕ್ಕೆ ತಕ್ಕ ತಿರುಗೇಟು ನೀಡಿರುವ ಅವರು, ಹೌದು...ಅವರ ಮಾತು ನೂರಕ್ಕೆ ನೂರರಷ್ಟು ಸತ್ಯ. ನಾನು ರಾಜ್ಯದ ಆರು ಕೋಟಿ ಜನರ ದಿನಗೂಲಿ ನೌಕರ ಎಂದು ತಿಳಿಸಿದ್ದಾರೆ.
ಸದಾನಂದ ಗೌಡ ಮುಖ್ಯಮಂತ್ರಿಯಾಗಿ ಒಂದು ತಿಂಗಳ ಅವಧಿ ಕಳೆದಿದೆ. ಅವರೊಬ್ಬ ದಿನಗೂಲಿ ನೌಕರನಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದ್ದರು. ಆ ಬಗ್ಗೆ ಸೋಮವಾರ ಡಿವಿ ಅವರನ್ನು ಸುದ್ದಿಗಾರರು ಪ್ರಶ್ನಿಸಿದಾಗ, ಅವರು ಮುಖ್ಯಮಂತ್ರಿಯಾಗಿದ್ದಾಗ ಅರ್ಥ ಮಾಡಿಕೊಳ್ಳದ ಸತ್ಯವನ್ನು ಈಗಲಾದ್ರೂ ಅರ್ಥ ಮಾಡಿಕೊಂಡರಲ್ಲ. ಹಾಗಾಗಿ ನಾನು ಕುಮಾರಸ್ವಾಮಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಅವರು ದೊಡ್ಡತನದಿಂದಲೇ ಅಧಿಕಾರ ನಡೆಸಿದ್ದಾರೆ. ನಾನು ನಿಜಕ್ಕೂ ಮುಖ್ಯಮಂತ್ರಿಯಾಗಿರುವಷ್ಟು ದಿನ ದಿನಗೂಲಿ ನೌಕರನಂತೆ ಕಾರ್ಯನಿರ್ವಹಿಸುತ್ತೇನೆ ಎಂದು ಮಾತಿನ ಚಾಟಿ ಏಟು ನೀಡಿದರು. ನಿಜಕ್ಕೂ ಅವರು ತುಂಬಾ ಕರೆಕ್ಟ್ ಆಗಿ ಹೇಳಿದ್ದಾರೆ.
ನಾನು ರಾಜ್ಯದ ದಿನಗೂಲಿ ನೌಕರ ಎಂಬುದನ್ನು ಹೇಳುವ ಮೂಲಕ ನನ್ನ ಮಾತನ್ನು ಅವರೇ ಹೇಳಿದ್ದಾರೆ. ಹಾಗಾಗಿ ನಾನು ಅವರನ್ನು ಅಭಿನಂದಿಸುತ್ತೇನೆ ಎಂದು ಪ್ರತಿಕ್ರಿಯಿಸಿದರು.