ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಕರ್ನಾಟಕ ಸುದ್ದಿ » ನೆಹರೂರಂತ ಪ್ರಾಮಾಣಿಕರು ರಾಜಕಾರಣಕ್ಕೆ ಬೇಕು: ಗವರ್ನರ್ (Jawaharalal Neharu | Governor | Yeddyurappa | Congress | Karnataka News | Bangalore News,)
ನೆಹರೂರಂತ ಪ್ರಾಮಾಣಿಕರು ರಾಜಕಾರಣಕ್ಕೆ ಬೇಕು: ಗವರ್ನರ್
ಬೆಂಗಳೂರು, ಮಂಗಳವಾರ, 13 ಸೆಪ್ಟೆಂಬರ್ 2011( 12:18 IST )
ಮತದಾರರು ಚುನಾವಣೆಯಲ್ಲಿ ಅಪ್ರಾಮಾಣಿಕರನ್ನು ಆಯ್ಕೆ ಮಾಡಬಾರದು. ಅಂಥ ಸರ್ಕಾರದ ವಿರುದ್ಧ ನಾನು ಎರಡು ವರ್ಷ ಹೊರಟ ನಡೆಸಿದೆ. ಅಂತಿಮವಾಗಿ ಆ ಸರ್ಕಾರ ನಿಸರ್ಗದ ನ್ಯಾಯಕ್ಕೆ ತಲೆಬಾಗಲೇಬೇಕಾದ ಪರಿಸ್ಥಿತಿ ಎದುರಾಯಿತು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡ ಪರಿ ಇದು.
ಸೋಮವಾರ ನೆಹರೂ ತಾರಾಲಯದಲ್ಲಿ ಆಯೋಜಿಸಲಾಗಿದ್ದ ಚಂದ್ರನ ಬಗ್ಗೆ ಮಾಹಿತಿ ನೀಡುವ ನೂತನ ಪ್ಲಾನಿಟೋರಿಯಂ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಜಕೀಯದಲ್ಲಿ ಬದ್ಧತೆಯುಳ್ಳ ರಾಜಕಾರಣಿಗಳನ್ನು ಆಯ್ಕೆ ಮಾಡಬೇಕಾದ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಚುನಾವಣೆಯಲ್ಲಿ ಮತದಾರ ಆದರ್ಶ ಮತ್ತು ಪ್ರಾಮಾಣಿಕ ವ್ಯಕ್ತಿಗಳನ್ನು ಆಯ್ಕೆ ಮಾಡಬೇಕು.
ಜವಾಹರಲಾಲ್ ನೆಹರೂ, ಸರ್ದಾರ್ ವಲ್ಲಭಾಯ್ ಪಟೇಲ್ ಮತ್ತು ಅಂಬೇಡ್ಕರ್ರಂತಹ ಪ್ರಾಮಾಣಿಕ ವ್ಯಕ್ತಿಗಳು ರಾಜಕಾರಣದಲ್ಲಿದ್ದರು. ಅಂತಹ ವ್ಯಕ್ತಿಗಳ ಆದರ್ಶಗಳನ್ನೊಳಗೊಂಡ ರಾಜಕಾರಣಿಗಳ ಅಗತ್ಯವಿದೆ ಎಂದು ಹಂಸರಾಜ್ ಅಭಿಪ್ರಾಯಪಟ್ಟರು.
ಅಲ್ಲದೇ ಸಾರ್ವಜನಿಕರ ಅಸಡ್ಡೆಯಿಂದಾಗಿ ಇಂದು ಗಂಗಾ, ಯುಮುನಾ ಮತ್ತಿತರ ನದಿಗಳು ಕಲುಷಿತಗೊಂಡಿದೆ. ರಾಜ್ಯದಲ್ಲಿನ ಅನೇಕ ಕೆರೆಗಳು ಮಲಿನಗೊಂಡಿದ್ದರೆ, ಮತ್ತೆ ಕೆಲವನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಇದರಿಂದಾಗಿ ಸಾರ್ವಜನಿಕರು ನೀರಿನ ಸಮಸ್ಯೆಯನ್ನು ದೊಡ್ಡ ಮಟ್ಟದಲ್ಲಿ ಕಾಡುತ್ತಿದೆ. ಪರಿಸರ ಸಂರಕ್ಷಣೆಯತ್ತ ಎಲ್ಲರೂ ಗಮನ ಹರಿಸಬೇಕು. ಆದ್ದರಿಂದ ಸಾರ್ವಜನಿಕರು ನಾಗರಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕು ಎಂದು ಈ ಸಂದರ್ಭದಲ್ಲಿ ಕರೆ ನೀಡಿದರು.