ರಾಷ್ಟ್ರೀಯ | ಅಂತಾರಾಷ್ಟ್ರೀಯ | ಕರ್ನಾಟಕ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಕರ್ನಾಟಕ ಸುದ್ದಿ » ಟ್ರಸ್ಟಿಗಳಿಂದ್ಲೇ ಶಿರಡಿ ಸಾಯಿಬಾಬಾ ಮಂದಿರದ ಹಣ ಲೂಟಿ! (Shirdi Sai Baba | Sai Baba | Trustee | Hubballi | Karnataka News | Bangalore News)
shiradi saibaba
PR
ಶಿರಡಿ ಸಾಯಿಬಾಬಾ ಮಂದಿರದಲ್ಲಿ ಭಕ್ತರ ನೀಡಿದ ಲಕ್ಷಾಂತರ ರೂಪಾಯಿ ಕಾಣಿಕೆಯನ್ನೇ ಟ್ರಸ್ಟಿ ಹಾಗೂ ಅಧ್ಯಕ್ಷರೇ ಗುಳುಂ ಮಾಡಿರುವ ಘಟನೆ ಸಿಸಿಟಿವಿಯಿಂದ ಬಯಲಾಗಿದೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ನಗರದ ಕೋರ್ಟ್ ಸರ್ಕಲ್ ಸಮೀಪ ಇರುವ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಭಕ್ತರು ಹುಂಡಿಗೆ ಹಾಕಿರುವ ಹಣವನ್ನು ಪ್ರತಿ ತಿಂಗಳು ಲೆಕ್ಕಚಾರ ಮಾಡಲಾಗುತ್ತದೆ. ಆದರೆ ಹಣ ಎಣಿಕೆ ಸಂದರ್ಭದಲ್ಲಿ ಪ್ರತಿಯೊಬ್ಬರ ಚಲನವಲನ ಸಿಸಿಟಿವಿಯಲ್ಲಿ ದಾಖಲಾಗುತ್ತದೆ. ಇದೀಗ ಮಂದಿರದ ಟ್ರಿಸ್ಟಿಗಳೇ ಭಕ್ತರ ಹಣವನ್ನು ಲೂಟಿ ಮಾಡಿರುವ ಅಂಶ ಸಾರ್ವಜನಿಕರ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ.

ಸಾಯಿಬಾಬಾ ಮಂದಿರದ ಹಣ ಎಣಿಕೆ ಸಂದರ್ಭದಲ್ಲಿ ಮಂದಿರದ ಅಧ್ಯಕ್ಷ ಅಶೋಕ್ ಗೋಳೇಕರ, ಟ್ರಸ್ಟಿಗಳಾದ ಶಿವಾಜಿರಾವ್ ಶಿಂಧೆ ಹಾಗೂ ಚನ್ನಬಸಪ್ಪ ಎಂಬ ಮೂವರು ಖದೀಮರು ಸುಮಾರು 50 ಲಕ್ಷಕ್ಕೂ ಹೆಚ್ಚು ಹಣವನ್ನು ತಮ್ಮ ಜೇಬಿಗೆ ಇಳಿಸಿಕೊಂಡಿದ್ದಾರೆ.

ಮಂದಿರದ ಸಿಸಿಟಿವಿಯಲ್ಲಿ ಗೋಳೇಕರ, ಶಿವಾಜಿರಾವ್ ಮತ್ತು ಚನ್ನಬಸಪ್ಪ ಹಣವನ್ನು ಲಪಟಾಯಿಸಿರುವ ಅಂಶ ದಾಖಲಾಗಿರುವುದಾಗಿ ಮಂದಿರದ ಧನಂಜಯ್ ಜೋಷ್ವಾನಿ ಆರೋಪಿಸಿದ್ದಾರೆ.

ಅಲ್ಲದೇ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಭಕ್ತರು ನೀಡಿದ ಹಣವನ್ನೇ ಲೂಟಿ ಮಾಡಿರುವ ಟ್ರಸ್ಟಿಗಳ ಕೃತ್ಯವನ್ನು ಹುಬ್ಬಳ್ಳಿಯ ಗಜಾನನ ಮಹಾಮಂಡಳಿ ತೀವ್ರ ಪ್ರತಿಭಟನೆ ನಡೆಸಿ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿತ್ತು.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಹುಬ್ಬಳ್ಳಿ, ಶಿರಡಿ ಸಾಯಿಬಾಬಾ, ಟ್ರಸ್ಟಿ, ಹಣ ಗುಳುಂ, ಕನ್ನಡ ಸುದ್ದಿ, ಕರ್ನಾಟಕ ಸುದ್ದಿ, ರಾಷ್ಟ್ರೀಯ ಸುದ್ದಿ, ಬ್ರೇಕಿಂಗ್ ನ್ಯೂಸ್, ತಾಜಾ ಕನ್ನಡ ಸುದ್ದಿ, ರಾಜಕೀಯ, ಬೆಂಗಳೂರು ಸುದ್ದಿ, ಭಾರತೀಯ ಸುದ್ದಿ, ಕರ್ನಾಟಕ ರಾಜಕೀಯ, ಕನ್ನಡ ಆನ್ಲೈನ