ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಕರ್ನಾಟಕ ಸುದ್ದಿ » ಜನರ ಬಗ್ಗೆ ಕಾಳಜಿ ಇಲ್ವಾ: ಶೋಭಾ ವಿರುದ್ಧ ದೇವೇಗೌಡ ಆಕ್ರೋಶ (Deve gowda | BJP | Shobha karndlaje | JDS | Karnataka News | Bangalore News,)
ಜನರ ಬಗ್ಗೆ ಕಾಳಜಿ ಇಲ್ವಾ: ಶೋಭಾ ವಿರುದ್ಧ ದೇವೇಗೌಡ ಆಕ್ರೋಶ
ಕೆಂಗೇರಿ ಉಪನಗರ, ಸೋಮವಾರ, 19 ಸೆಪ್ಟೆಂಬರ್ 2011( 09:56 IST )
ಕ್ಷೇತ್ರದ ಜನರು ಬೀದಿಗೆ ಬಿದ್ದು ಪರದಾಡುತ್ತಿದ್ದರೆ ಕ್ಷೇತ್ರದ ಶಾಸಕಿ ಶೋಭಾ ಕರಂದ್ಲಾಜೆ ಕೊಪ್ಪಳ ಉಪ ಚುನಾವಣೆಯಲ್ಲಿ ಬಿಜಿಯಾಗಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮನೆಗಳನ್ನು ಖಾಲಿ ಮಾಡುವಂತೆ ಇಲ್ಲಿನ ಗಾಂಧಿನಗರದ ಜನರಿಗೆ ಸರ್ಕಾರದಿಂದ ನೋಟಿಸ್ ಬಂದಿರುವ ಹಿನ್ನೆಲೆಯಲ್ಲಿ ಜನರನ್ನು ಭೇಟಿ ಮಾಡಿದ ಅವರು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಇಲ್ಲಿನ ಶಾಸಕರಿಗೆ ಕ್ಷೇತ್ರದ ಜನರ ಬಗ್ಗೆ ನಿಜವಾದ ಕಾಳಜಿ ಇದ್ದರೆ ತಕ್ಷಣವೇ ಸಮಸ್ಯೆಯನ್ನು ಪರಿಹರಿಸಬೇಕು.ತಿಂಗಳೊಳಗಾಗಿ ಸಮಸ್ಯೆ ಪರಿಹರಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಗಾಂಧಿನಗರದ ಸಾವಿರಾರು ಕುಟುಂಬಗಳು ರಾಷ್ಟ್ರೀಕೃತ ಬ್ಯಾಂಕ್ ಸೇರಿದಂತೆ ನಾನಾ ಮೂಲಗಳಿಂದ ಸಾಲ ಪಡೆದುಕೊಂಡು ಮನೆ ಕಟ್ಟಿಕೊಂಡಿರುವುದಲ್ಲದೆ, ಪಡಿತರ, ಮತದಾನ ಚೀಟಿ ಸೇರಿದಂತೆ ಸರ್ಕಾರದ ಹಲವಾರು ಮೂಲಭೂತ ಸೌಲಭ್ಯಗಳನ್ನು ಪಡೆದುಕೊಂಡಿದ್ದಾರೆ. ಆದರೆ ಕಿಡಿಗೇಡಿಗಳ ಕುತಂತ್ರದಿಂದ ಇಲ್ಲಿನ ಮನೆಗಳನ್ನು ತೆರವುಗೊಳಿಸುವ ನೋಟಿಸ್ ನೀಡಲಾಗಿದೆ ಎಂದು ಕಿಡಿಕಾರಿದರು.