ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಕರ್ನಾಟಕ ಸುದ್ದಿ » ಕುಮಾರಸ್ವಾಮಿಗೆ ಪಟಾಕಿ ಸಿಡಿಸಿ ಬೇಸ್ತು ಬಿದ್ದ 'ಕೈ' ಕಾರ್ಯಕರ್ತರು! (Kumaraswamy | JDS | Congress | Koppala by election | Karnataka News | Bangalore News,)
ಕುಮಾರಸ್ವಾಮಿಗೆ ಪಟಾಕಿ ಸಿಡಿಸಿ ಬೇಸ್ತು ಬಿದ್ದ 'ಕೈ' ಕಾರ್ಯಕರ್ತರು!
ಬೆಂಗಳೂರು, ಬುಧವಾರ, 21 ಸೆಪ್ಟೆಂಬರ್ 2011( 09:46 IST )
PR
ಕೊಪ್ಪಳ ವಿಧಾನಸಭಾ ಉಪ ಚುನಾವಣೆ ಪ್ರಚಾರ ಭರಾಟೆ ಭರ್ಜರಿಯಾಗಿಯೇ ನಡೆಯುತ್ತಿದ್ದು, ಮಂಗಳವಾರ ಚುನಾವಣಾ ಪ್ರಚಾರಕ್ಕೆ ತೆರಳುತ್ತಿದ್ದ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸ್ವಾಗತ ಕೋರಿದ ಘಟನೆ ನಡೆಯಿತು!
ಸೆಪ್ಟೆಂಬರ್ 26ರಂದು ನಡೆಯಲಿರುವ ಉಪ ಚುನಾವಣೆಯಲ್ಲಿ ಸ್ಪರ್ಧಿಸಿರುವ ಜೆಡಿಎಸ್ ಅಭ್ಯರ್ಥಿ ಪ್ರದೀಪ್ ಗೌಡ ಅವರ ಪರ ಪ್ರಚಾರ ಕೈಗೊಳ್ಳಲು ಕುಮಾರಸ್ವಾಮಿ ಕೊಪ್ಪಳದ ಹೊಸಹಳ್ಳಿಗೆ ತೆರಳುವ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕುಮಾರಸ್ವಾಮಿ ಅವರ ಕಾರು ಕಂಡ ಕೂಡಲೇ ತಮ್ಮ ನಾಯಕರೇ ಬಂದಿದ್ದಾರೆ ಎಂದು ಭಾವಿಸಿ ತಾವು ತಂದಿದ್ದ ಪಟಾಕಿಗಳನ್ನು ಸಿಡಿಸಿ ಹರ್ಷ ವ್ಯಕ್ತಪಡಿಸಿದರು.
ಆದರೆ ಕಾರಿನಿಂದ ಇಳಿದ ಕುಮಾರಸ್ವಾಮಿ ಅವರನ್ನು ಕಂಡು ಪೆಚ್ಚು ಮೋರೆ ಹಾಕಿದ ಕಾಂಗ್ರೆಸ್ ಕಾರ್ಯಕರ್ತರು ಅಲ್ಲಿಂದ ಜಾಗ ಖಾಲಿ ಮಾಡಿದರು.