ಉದ್ಯಮಿ ವಿಜಯ್ ಮಲ್ಯ ಅವರು ಮಹಾತ್ಮಾಗಾಂಧೀಜಿಯವರ ವಸ್ತುಗಳನ್ನು ಹರಾಜಿನಲ್ಲಿ ಪಡೆದುಕೊಂಡಿರುವ ಬಳಿಕ, ಇದೀಗ ಆ ವಸ್ತುಗಳನ್ನು ಭಾರತಕ್ಕೆ ಮರಳಿ ತಂದಿರುವ ಕೀರ್ತಿ ತನ್ನದೆಂದು ಸರ್ಕಾರ ಹೇಳಿದೆ.ನ್ಯೂಯಾರ್ಕಿನಲ್ಲಿ ಶುಕ್ರವಾರ ಮುಂಜಾವಿನ ವೇಳೆ ನಡೆದ ಹರಾಜಿನಲ್ಲಿ 1.8 ದಶಲಕ್ಷ ಡಾಲರ್ಗಳ (9 ಕೋಟಿ ರೂಪಾಯಿ) ಬಿಡ್ನಲ್ಲಿ ಮಲ್ಯ ಗಾಂಧೀಜಿಯವರು ಬಳಸಿದ್ದ, ಐತಿಹಾಸಿಕ ಅಮೂಲ್ಯ ವಸ್ತುಗಳನ್ನು ಖರೀದಿಸಿದ್ದಾರೆ.ಹರಾಜಿನ ಈ ಖರೀದಿಗಾಗಿ ಸರ್ಕಾರವು ಮಲ್ಯ ಅವರ ನಿರಂತರ ಸಂಪರ್ಕದಲ್ಲಿತ್ತು ಎಂದು ಕೇಂದ್ರ ಸಂಸ್ಕೃತಿ ಸಚಿವೆ ಅಂಬಿಕಾ ಸೋನಿ ಹೇಳಿದ್ದಾರೆ.ಡಾ| ಮಲ್ಯ ಅವರು ಸರ್ಕಾರದ ಸಂಯೋಗದೊಂದಿಗೆ ಈ ವಸ್ತುಗಳನ್ನು ಭಾರತಕ್ಕೆ ಮರಳುವಂತೆ ಮಾಡಿದ್ದಾರೆ ಎಂದು ಸೋನಿ ತಿಳಿಸಿದ್ದಾರೆ.ನಾಟಕೀಯ ಬೆಳವಣಿಗೆಗಳ ಬಳಿಕ ನಡೆದ ಹರಾಜಿನಲ್ಲಿ ವಿಜಯ್ ಮಲ್ಯ ಅವರು ಈ ವಸ್ತುಗಳನ್ನು ಖರೀದಿಸಿದ್ದಾರೆ. ಈ ವೇಳೆ ಅವರು 'ರಾಷ್ಟ್ರಕ್ಕಾಗಿ ಬಿಡ್ ಮಾಡಿರುವುದಾಗಿ' ಹೇಳಿದ್ದಾರೆ. ಹರಾಜನ್ನು ತಡೆಯಲು ಸರ್ಕಾರವು ಕೊನೆಯ ಕ್ಷಣದ ಪ್ರಯತ್ನಗಳನ್ನು ಮಾಡಿದ್ದು, ಸಫಲವಾಗದ ಕಾರಣ, ಈ ವಸ್ತುಗಳನ್ನು ಪಡೆಯಲು ಬಿಡ್ನಲ್ಲಿ ಪಾಲ್ಗೊಳ್ಳುವುದು ಅನಿವಾರ್ಯವಾಗಿತ್ತು.ಹರಾಜಿಗೆ ಕೆಲವೇ ಕ್ಷಣಗಳಿಗೆ ಮುಂಚಿತವಾಗಿ ವಸ್ತುಗಳ ಮಾಲಕ ಜೇಮ್ಸ್ ಒಟಿಸ್ ಈ ವಸ್ತುಗಳ ಹರಾಜನ್ನು ಹಿಂತೆಗೆದುಕೊಳ್ಳುಲು ಒಪ್ಪಿದರಾದರೂ. ಹರಾಜು ಸಂಸ್ಥೆಯು ಇದಕ್ಕೆ ಒಪ್ಪಲಿಲ್ಲ. ಯಾಕೆಂದರೆ 30 ಬಿಡ್ಡರ್ಗಳು ಅದಾಗಲೇ ತಮ್ಮ ಹೆಸರನ್ನು ನೋಂದಾಯಿಸಿದ್ದರು ಮತ್ತು ಕೆಲವರು ಲಿಖಿತ ಬಿಡ್ಗಳನ್ನು ಮಾಡಿದ್ದರು.ಹೆಚ್ಚಿನ ಮಾಹಿತಿಗೆ ಗಾಂಧೀಜಿ ವಸ್ತುಗಳನ್ನು ಖರೀದಿಸಿದ ವಿಜಯ್ ಮಲ್ಯ ಓದಿ |