ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಚುನಾವಣೆ ಸುಧಾರಣೆ; ಶೀಘ್ರದಲ್ಲೇ ಪ್ರಧಾನಿಗೆ ಅಣ್ಣಾ ಹಜಾರೆ ಪತ್ರ (Anna Hazare | Manmohan Singh | right to recall elected representatives | Aravind Kejriwal)
ಚುನಾವಣೆ ಸುಧಾರಣೆ; ಶೀಘ್ರದಲ್ಲೇ ಪ್ರಧಾನಿಗೆ ಅಣ್ಣಾ ಹಜಾರೆ ಪತ್ರ
ನವದೆಹಲಿ, ಭಾನುವಾರ, 11 ಸೆಪ್ಟೆಂಬರ್ 2011( 10:52 IST )
ಚುನಾವಣಾ ಸುಧಾರಣೆ, ಜನಪ್ರತಿನಿಧಿಗಳನ್ನು ವಾಪಾಸ್ ಕರೆಯಿಸಿಕೊಳ್ಳುವ ಮತ್ತು ತಿರಸ್ಕರಿಸುವ ಹಕ್ಕು ಸೇರಿದಂತೆ ಸಂಸದರ ಕಾರ್ಯವೈಖರಿ ಪರಿಶೀಲನೆ ಕುರಿತು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರಿಗೆ ಶೀಘ್ರವೇ ಸಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಪತ್ರ ಬರೆಯಲಿದ್ದಾರೆ.
ಪ್ರಬಲ ಜನ ಲೋಕಪಾಲ ಮಸೂದೆಗೆ ಒತ್ತಾಯಿಸಿ ಅಣ್ಣಾ ಹಜಾರೆ ನಡೆಸಿದ ನಿರಶನದ ನಂತರ ಇದೇ ಮೊದಲ ಬಾರಿಗೆ ನಡೆಯುತ್ತಿರುವ ಎರಡು ದಿನಗಳ ಕಾಲದ ಅಣ್ಣಾ ಹಜಾರೆ ತಂಡದ ಕೇಂದ್ರ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಚುನಾವಣಾ ಸುಧಾರಣೆ ಮತ್ತು ಭೂ ಸ್ವಾಧೀನ ವಿಧೇಯಕ ಕುರಿತು ಪ್ರಧಾನಿ ಅಭಿಪ್ರಾಯ ಕೋರಿ ಗಾಂಧಿವಾದಿ ಅಣ್ಣಾ ಹಜಾರೆ ಪತ್ರ ಬರೆಯಲಿದ್ದಾರೆ ಎಂದು ನಾಗರಿಕ ಸಮಿತಿಯ ಸದಸ್ಯರಾಗಿರುವ ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ.
ರಾಳೇಗಣ್ ಸಿದ್ಧಿಯಲ್ಲಿ ನಡೆದ ಎರಡು ದಿನಗಳ ಸಭೆಯಲ್ಲಿ ಮಾಜಿ ನ್ಯಾವಾದಿ ಸಂತೋಷ್ ಹೆಗ್ಡೆ ಸಹ ಭಾಗವಹಿಸಿದ್ದರು. ಈ ಸಂದರ್ಭಧಲ್ಲಿ ಪ್ರಶಾಂತ್ ಭೂಷಣ್, ಕಿರಣ್ ಬೇಡಿ ಮತ್ತು ಮೇಧಾ ಪಾಟ್ಕರ್ ಸಹ ಉಪಸ್ಥಿತರಿದ್ದರು.
ಚುನಾವಣೆಯಲ್ಲಿ ಸ್ಪರ್ಧಿಸಿದ ಉಮೇದುದಾರರನ್ನು ತಿರಸ್ಕರಿಸಲು ಮತಯಂತ್ರದಲ್ಲಿ ಅವಕಾಶ ನೀಡಬೇಕು ಹಾಗೂ ಕಾರ್ಯಕ್ಷಮತೆ ಉತ್ತಮವಾಗಿಲ್ಲದ ಜನಪ್ರತಿನಿಧಿಗಳನ್ನು ವಾಪಸ್ ಕರೆಯಿಸಿಕೊಳ್ಳುವ ಹಕ್ಕು ಮತದಾರರಿಗೆ ಇರಬೇಕು ಎಂಬುದರ ವಿಚಾರವಾಗಿ ಶೀಘ್ರವೇ ಪ್ರಧಾನಿ ಅವರಿಗೆ ಅಣ್ಣಾ ಹಜಾರೆ ಪತ್ರ ಬರೆಯಲಿದ್ದಾರೆ.