ಬೆಂಗಳೂರು, ಭಾನುವಾರ, 11 ಸೆಪ್ಟೆಂಬರ್ 2011( 10:12 IST )
ಶಾಸಕ ಸ್ಥಾನಕ್ಕೆ ತಾನು ನೀಡಿರುವ ರಾಜೀನಾಮೆಗೆ ಬದ್ಧನಾಗಿದ್ಧು, ಯಾವುದೇ ಕಾರಣಕ್ಕೂ ರಾಜೀನಾಮೆ ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ಮಾಜಿ ಸಚಿವ ಬಿ. ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮುಲು, ಸ್ಪೀಕರ್ ಕೆ. ಜಿ. ಬೋಪಯ್ಯ ಕೇಳಿದ ಸ್ಪಷ್ಟೀಕರಣಕ್ಕೆ ದಾಖಲೆ ಸಮೇತ ಉತ್ತರಿಸಲಿದ್ದು ರಾಜೀನಾಮೆ ಅಂಗೀಕರಿಸುವಂತೆ ಮನವಿ ಮಾಡುತ್ತೇನೆ ಎಂದಿದ್ದಾರೆ.
ರಾಜೀನಾಮೆ ಅಂಗೀಕರಿಸಲು ಸ್ಪೀಕರ್ ಕೆಲವೊಂದು ಸ್ಪಷ್ಟೀಕರಣ ಕೇಳಿದ್ದಾರೆ. ಈ ಸಂಬಂಧ ಕಾನೂನು ತಜ್ಞರೊಂದಿಗೆ ಸಮಾಲೋಚಿಸಿ ದಾಖಲೆ ಸಿದ್ಧಪಡಿಸಿದ್ದೇನೆ ಎಂದಿದ್ದಾರೆ.
ಲೋಕಾಯುಕ್ತರ ಅಕ್ರಮ ಗಣಿಕಾರಿಗೆ ವರದಿಯಲ್ಲಿ ತಮ್ಮ ಹೆಸರು ಸೇರ್ಡೆಡೆಯಾಗಿದ್ದರಿಂದ ಶ್ರೀರಾಮುಲು ಸೆಪ್ಟೆಂಬರ್ 3ರಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ಅದಕ್ಕೆ ಕೆಲವೊಂದು ಸ್ಪಷ್ಟೀಕರಣವನ್ನು ಸ್ಪೀಕರ್ ಕೇಳಿಕೊಂಡಿದ್ದರು.
ಇದೇ ಸಂದರ್ಭದಲ್ಲಿ ಗಣಿಗಾರಿಕೆ ಕಾನೂನು ಸಮರದಲ್ಲಿ ರೆಡ್ಡಿ ಸಹೋದರರು ಎಲ್ಲ ತನಿಖೆಗೆ ಸಿದ್ಧವಾಗಿದ್ದೇವೆ. ಎಲ್ಲ ತೊಡಕುಗಳನ್ನು ನಿವಾರಿಸಿ ಗೆದ್ದು ಬರುತ್ತೇವೆ ಎಂದಿದ್ದಾರೆ.