ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ರಾಜ್ಯ ಸರಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ರಾಜ್ಯದಲ್ಲಿ ನಾಲ್ಕು ಸರಕಾರಗಳು ಆಡಳಿತ ನಡೆಸಿದ್ದು, ಈ ನಾಲ್ಕು ಸರಕಾರದ ದಿನಗೂಲಿ ಮುಖ್ಯಮಂತ್ರಿ ಸದಾನಂದಗೌಡ ಅವರಾಗಿದ್ದಾರೆ ಎಂದು ಮಾತಿನ ಅಸ್ತ್ರ ಪ್ರಯೋಗಿಸಿದ್ದಾರೆ.
ರಾಜ್ಯದಲ್ಲಿ ನಾಲ್ಕು ಸರಕಾರಗಳು ಅಸ್ಥಿತ್ವದಲ್ಲಿವೆ. ಯಡಿಯೂರಪ್ಪ, ಸದಾನಂದ ಗೌಡ, ಜಗದೀಶ್ ಶೆಟ್ಟರ್, ಅನಂತ್ ಕುಮಾರ್ ಸೇರಿದಂತೆ ಪ್ರತಿ ಬಣದಿಂದಲೂ ಕಾರ್ಯ ನಿರ್ವಹಣೆ ನಡೆಯುತ್ತಿದೆ. ನಾಲ್ಕು ಬಣಗಳು ಸಹ ಪ್ರತ್ಯೇಕವಾಗಿ ಸರಕಾರ ನಡೆಸುತ್ತಿವೆ. ಸದಾನಂದ ಗೌಡರು ಕೈಗೊಂಬೆಯಾಗಿದ್ದು ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಿರೀಕ್ಷೆ ಮಾಡುವಂತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಕಳೆದ ಒಂದು ತಿಂಗಳಿನಿಂದ ಅನಿವಾರ್ಯಗಳಿಂದ ಮೌನಕ್ಕೆ ಶರಣಾಗಬೇಕಾಯಿತು. ಆದರೆ ಈ ಬಗ್ಗೆ ಕಾಂಗ್ರೆಸ್ ಹಾಗೂ ಬಿಜೆಪಿ ಇಲ್ಲಸಲ್ಲದ ಆರೋಪ ಮಾಡುತ್ತಿವೆ. ಅವರಿಗೆಲ್ಲ ಸದ್ಯದಲ್ಲೇ ಉತ್ತರ ನೀಡಲಿದ್ದೇನೆ ಎಂದಿದ್ದಾರೆ.
ನನ್ನ ವಿರುದ್ಧದ ಷಡ್ಯಂತ್ರದ ಬಗ್ಗೆ ಜನರಿಗೆ ತಿಳಿಸ್ತೇನೆ. ನಾಳೆಯಿಂದಲೇ ಕೊಪ್ಪಳದಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದು, ಆ ಮೂಲಕ ನನ್ನ ಹೋರಾಟ ರಾಜ್ಯಾದ್ಯಂತ ಆರಂಭವಾಗಲಿದೆ. ಉಪಚುನಾವಣೆಯಲ್ಲಿ ಜೆಡಿಎಸ್ ಸಾಮರ್ಥ್ಯ ಏನೆಂಬುದು ಸಾಬೀತುಪಡಿಸಲಿದ್ದೇನೆ ಎಂದಿದ್ದಾರೆ.
ಆಡ್ವಾಣಿ ಏನೊ ಒಂದು ರಥಯಾತ್ರೆ ಮಾಡ್ತಾರೋ ಅದಕ್ಕೂ ಮೊದಲು ರಾಜ್ಯದ ಭ್ರಷ್ಟಚಾರ ಮುಖ್ಯಮಂತ್ರಿ ಸದಾನಂದಗೌಡರ ಬಗ್ಗೆ ಏನು ಹೇಳುತ್ತಾರೆ ಎಂಬುದನ್ನು ಕುಮಾರಸ್ವಾಮಿ ಪ್ರಶ್ನಿಸಿದರು.