ಸಚಿವರ ಮೇಲೆ ಹಲ್ಲೆ ನಡೆಸಿದ ಆರೋಪಿ ಬಿ. ಎಸ್. ಪ್ರಸಾದ್ ಲಿಂಗಾಯುತ ಜನಾಂಗಕ್ಕೆ ಸೇರಿವದವನಾಗಿದ್ದು, ಆತ ಬಿಜೆಪಿ ಮುಖಂಡ ಎಂದು ಗೃಹ ಸಚಿವ ಆರ್. ಅಶೋಕ್ ಖಚಿತಪಡಿಸಿಕೊಂಡಿದ್ದಾರೆ.
ಭದ್ರತಾ ವೈಫಲ್ಯ... ಈ ನಡುವೆ ತಮ್ಮ ಮೇಲಿನ ಹಲ್ಲೆಯನ್ನು ಖಂಡಿಸಿರುವ ಸಚಿವ ವಿ. ಸೋಮಣ್ಣ ಘಟನೆಯನ್ನು ಭದ್ರತಾ ವೈಫಲ್ಯ ಎಂದಿದ್ದಾರೆ. ವಿಧಾನಸೌಧದಲ್ಲೇ ಜನಪ್ರತಿನಿಧಿಗಳ ಮೇಲೆ ನಡೆಯುತ್ತಿರುವುದು ತೀವ್ರ ಖಂಡನೀಯ. ಆದರೆ ಘಟನೆಯನ್ನು ವೈಭವೀಕರಿಸಲು ಇಷ್ಟಪಡುವುದಿಲ್ಲ ಎಂದಿದ್ದಾರೆ.
ಮುಖ್ಯಮಂತ್ರಿ ನನ್ನನ್ನು ಕರೆದು ಮಾತನಾಡಿದ್ದು, ಖೇದ ವ್ಯಕ್ತಪಡಿಸಿದ್ದಾರೆ. ಆದರೆ ಗೃಹ ಸಚಿವ ಆರ್. ಅಶೋಕ್ ಕರೆ ಮಾಡಿಲ್ಲ ಎಂದಿದ್ದಾರೆ. ಮತ್ತೊಂದೆಡೆ ಭದ್ರತಾ ವೈಫ್ಯಲ ಆಗಿಲ್ಲ ಎಂಬ ಗೃಹ ಸಚಿವರ ಹೇಳಿಕೆಯು ಸಚಿವರ ನಡುವಣ ಭಿನ್ನಭಿಪ್ರಾಯಕ್ಕೆ ಕಾರಣವಾಗಿದೆ.