ಮುಖ್ಯ ಪುಟ  ಧರ್ಮ > ಧಾರ್ಮಿಕ ಯಾತ್ರೆ > ಕ್ಷೇತ್ರಗಳು
 
ಕಲಿಯುಗ ವರದ ಶಬರಿಮಲೆ ಅಯ್ಯಪ್ಪ
WD
ಕಲಿಯುಗದಲ್ಲಿ ಕ್ಷಿಪ್ರ ವರಪ್ರಸಾದ ಅನುಗ್ರಹಿಸುವ ದೇವರು ಎಂಬ ನಂಬಿಕೆಗೆ ಪಾತ್ರವಾಗಿರುವ ಶ್ರೀ ಸ್ವಾಮಿ ಅಯ್ಯಪ್ಪನ ನೆಲೆವೀಡು ಕೇರಳದ ಶಬರಿಮಲೆ. ಇದು ವಿಶ್ವದ ಅತ್ಯಂತ ಹೆಚ್ಚು ಭಕ್ತ ಸಮುದಾಯವು ಸಂದರ್ಶಿಸುವ ಧಾರ್ಮಿಕ ತಾಣಗಳಲ್ಲೊಂದು. ಮೆಕ್ಕಾದ ಹಜ್ ಬಳಿಕ ವಿಶ್ವದ ಎರಡನೇ ಅತಿದೊಡ್ಡ ವಾರ್ಷಿಕ ಯಾತ್ರಾ ಕೇಂದ್ರ ಶಬರಿಮಲೆ ಎಂದೂ ಹೇಳಲಾಗುತ್ತಿದೆ. ಕಳೆದ ವರ್ಷದ ನವೆಂಬರ್‌ನಿಂದ ಜನವರಿವರೆಗೆ ಅಂದಾಜು ಐದು ಕೋಟಿ ಭಕ್ತರು ಈ ಕ್ಷೇತ್ರವನ್ನು ಸಂದರ್ಶಿಸಿದ್ದಾರೆ.

ಇಲ್ಲಿ ಅಯ್ಯಪ್ಪ ಸ್ವಾಮಿ (ಧರ್ಮ ಶಾಸ್ತ) ಕಲಿಯುಗ ವರದನಾಗಿ ನೆಲೆ ನಿಂತಿದ್ದಾನೆ. ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧ ಯಾತ್ರಾ ಕೇಂದ್ರಗಳಲ್ಲೊಂದಾಗಿರುವ ಶಬರಿಮಲೆ ಇರುವುದು ಕೇರಳ-ತಮಿಳುನಾಡು ಗಡಿಯ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ. ದಟ್ಟ ಅರಣ್ಯಗಳಿರುವ ಪೂಂಗಾವನಂ ಎಂಬ 18 ಪರ್ವತಗಳಿಂದ ಈ ಕ್ಷೇತ್ರವು ಆವೃತವಾಗಿದೆ. ಅಯ್ಯಪ್ಪ ಸ್ವಾಮಿ ವಿಗ್ರಹವನ್ನು ಪರಶುರಾಮನು ಸ್ಥಾಪಿಸಿದನೆಂಬ ಪ್ರತೀತಿ ಇದೆ.

ಶಬರಿ ಮಲೆ ಅಯ್ಯಪ್ಪ ಸ್ವಾಮಿಯ ಫೋಟೊ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ.

WD
ಪೌರಾಣಿಕ ಹಿನ್ನೆಲೆ: ಅಯ್ಯಪ್ಪ ಸ್ವಾಮಿಯು ಹರಿ ಮತ್ತು ಹರರಿಗೆ ಜನಿಸಿದ ಎಂದು ಪುರಾಣ ಹೇಳುತ್ತದೆ. ಭಸ್ಮಾಸುರನನ್ನು ವಧಿಸಲು ಮೋಹಿನಿ ರೂಪ ತಾಳಿ ಬಂದ ವಿಷ್ಣುವಿನ ರೂಪಕ್ಕೆ ಈಶ್ವರನು ಮನಸೋತ. ಅವರಿಬ್ಬರ ಸಾಂಗತ್ಯದಿಂದ ಪುಟ್ಟ ಬಾಲಕನೊಬ್ಬ ಆವಿರ್ಭವಿಸಿದ. ಆ ಬಾಲಕನನ್ನು ವಿಷ್ಣು ಮತ್ತು ಈಶ್ವರ ಕಾಡಿನಲ್ಲಿ ಇರಿಸಿ, ಪುತ್ರ ಸಂತಾನಕ್ಕಾಗಿ ಪ್ರಾರ್ಥನೆ ಮಾಡುತ್ತಿದ್ದ ಪಂದಳ ರಾಜ ಬೇಟೆಗೆಂದು ಕಾಡಿಗೆ ಬಂದಾಗ ಆವನ ಕೈಗೆ ದೊರೆಯುವಂತೆ ಮಾಡಿದರು.

WD
ಇಲ್ಲಿ ಮಂಡಲಪೂಜೆ (ನವೆಂಬರ್ 15) ಮತ್ತು ಮಕರವಿಳಕ್ಕು (ಜನವರಿ 14) ಇವೆರಡು ಯಾತ್ರಾ ಅವಧಿಯ ಪ್ರಧಾನ ಧಾರ್ಮಿಕ ಕಾರ್ಯಕ್ರಮಗಳು. ವರ್ಷದ ಇತರ ಅವಧಿಯಲ್ಲಿ ಮಲಯಾಳೀ ವರ್ಷದ ಮೊದಲ ಐದು ದಿನಗಳು ಹಾಗೂ ವಿಷು (ಏಪ್ರಿಲ್) ದಿನದ ಹೊರತಾಗಿ ಈ ಮಂದಿರವು ಮುಚ್ಚಿರುತ್ತದೆ.

ಪಳ್ಳಿಕಟ್ಟು (ಇರುಮುಡಿ) ಕಟ್ಟಿ ಅಯ್ಯಪ್ಪ ಯಾತ್ರಿಗಳು ತರುವ ತುಪ್ಪವನ್ನು ಅಯ್ಯಪ್ಪ ವಿಗ್ರಹದ ಮೇಲೆ ಅಭಿಷೇಕ ಮಾಡಲಾಗುತ್ತದೆ. ಇದು ಜೀವಾತ್ಮವನ್ನು ಪರಮಾತ್ಮನೊಂದಿಗೆ ಮಿಳಿತಗೊಳಿಸುವುದು ಎಂಬುದರ ಪ್ರತೀಕ.

ಶಬರಿಮಲೆ ಅಯ್ಯಪ್ಪ ಸ್ವಾಮಿಯ ಫೋಟೊ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ.
ವೀಡಿಯೋ ವೀಕ್ಷಿಸಿ
  1 | 2 | 3  >> 
ಫೋಟೋಗ್ಯಾಲರಿ
ಶಬರಿಮಲೆಯ ಕುರಿತಾದ ಫೋಟೋ ಗ್ಯಾಲರಿ ಇಲ್ಲಿದೆ.
ಮತ್ತಷ್ಟು
ಅದ್ಭುತ ಶಿಲ್ಪಕಲೆಯ ಬೀಡು- ತ್ರ್ಯಂಬಕೇಶ್ವರ
ಜ್ಯೋತಿರ್ಲಿಂಗ ಕ್ಷೇತ್ರ- ಓಂಕಾರೇಶ್ವರ
ದಕ್ಷಿಣಾಭಿಮುಖಿ ಜ್ಯೋತಿರ್ಲಿಂಗ - ಮಹಾಕಾಲೇಶ್ವರ