ನಿರ್ದೇಶಕ ಜೇಕಬ್ ವರ್ಗಿಸ್ ಅವರ ಮಾಸ್ಟರ್ ಪೀಸ್ ಇದು. ಬಳ್ಳಾರಿ ಗಣಿ ಮಣ್ಣಿನ ವಾಸನೆಯನ್ನು ಹದವಾಗಿ ಮೆತ್ತಿ, ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರಿಗೆ ಭಿನ್ನ ಇಮೇಜ್ ನೀಡಿದ ಈ ಚಿತ್ರದಲ್ಲಿ ಪಾರ್ವತಿ ಮೆನನ್ ನಾಯಕಿಯಾಗಿದ್ದರು. ಲಾಂಗು-ಮಚ್ಚುಗಳಿಲ್ಲದೆ, ನಮ್ಮ ನೆಲದ ಸೊಗಡು ಏನಾಗುತ್ತಿದೆ ಎಂಬುದನ್ನು ಸೂಚ್ಯವಾಗಿ ವಿವರಿಸುವ ಕಥೆಯನ್ನು ಹೊಂದಿದ್ದ ಚಿತ್ರವಿದು. ಪುನೀತ್ ಇಲ್ಲಿ ಜಿಲ್ಲಾಧಿಕಾರಿ ಪಾತ್ರ ಮಾಡಿ ಸೈ ಎನಿಸಿಕೊಂಡಿದ್ದರು.